<p>ನಾಗಮಂಗಲ: ದೇವಾಲಯಗಳು ಅಭಿವೃದ್ಧಿ ಹೊಂದಬೇಕಾದರೆ ಅರ್ಚಕರೇ ಮೂಲ ಕಾರಣ ಎಂದು ಶ್ರೀರಂಗಪಟ್ಟಣದ ಆಗಮ ಜ್ಯೋತಿಷ ವಿದ್ವಾಂಸ ಡಾ.ಭಾನುಪ್ರಕಾಶ್ ಶರ್ಮಾ ಅಭಿಪ್ರಾಯಪಟ್ಟರು.<br /> <br /> ಅವರು ಈಚೆಗೆ ತಾಲ್ಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಮಠದ ವತಿಯಿಂದ ಆಯೋಜಿಸಿದ್ದ 6ನೇ ವರ್ಷದ ರಾಜ್ಯಮಟ್ಟದ ಅರ್ಚಕರ ವೃತ್ತಿ ಶಿಕ್ಷಣ ಶಿಬಿರದಲ್ಲಿ ಮಾತನಾಡಿದರು.<br /> <br /> ಶ್ರದ್ಧೆ, ಭಕ್ತಿ, ಪೂಜಾ ಕ್ರಮದ ನಿಖರ ಮಾಹಿತಿ ಮುಂತಾದವುಗಳನ್ನು ಅರ್ಚಕ ಹೊಂದಿದ್ದರೆ ದೇವಾಲಯಗಳು ಅಭಿವೃದ್ಧಿ ಹೊಂದುವುದೇ ಅಲ್ಲದೇ ಪುರಾತನ ಸಂಸ್ಕಾರ ಹಾಗೂ ಮೌಲ್ಯಗಳನ್ನು ಉಳಿಸುವಲ್ಲಿ ಕೂಡ ಆತನ ಪಾತ್ರ ಮಹತ್ತರವಾದುದು ಎಂದು ಹೇಳಿದರು.<br /> <br /> ಕಾಲಭೈರವೇಶ್ವರ ಸಂಸ್ಕೃತ ವೇದಾಗಮ ಮಹಾವಿದ್ಯಾಲಯದ ಪ್ರಾಂಶುಪಾಲ ಹಾಗೂ ಶಿಬಿರದ ನಿರ್ದೇಶಕ ಪ್ರೊ.ಸಿ. ನಂಜುಂಡಯ್ಯ, ವಿದ್ವಾಂಸ ಪ್ರೊ.ಎಸ್. ಗೋವಿಂದಭಟ್, ಡಾ.ಮಧುಸೂಧನ ಅಡಿಗ, ಜ್ಯೋತಿಷ ವಿದ್ವಾಂಸ ಡಾ.ಎನ್.ಎಸ್. ವಿಶ್ವಪತಿಶಾಸ್ತ್ರಿ ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಾಗಮಂಗಲ: ದೇವಾಲಯಗಳು ಅಭಿವೃದ್ಧಿ ಹೊಂದಬೇಕಾದರೆ ಅರ್ಚಕರೇ ಮೂಲ ಕಾರಣ ಎಂದು ಶ್ರೀರಂಗಪಟ್ಟಣದ ಆಗಮ ಜ್ಯೋತಿಷ ವಿದ್ವಾಂಸ ಡಾ.ಭಾನುಪ್ರಕಾಶ್ ಶರ್ಮಾ ಅಭಿಪ್ರಾಯಪಟ್ಟರು.<br /> <br /> ಅವರು ಈಚೆಗೆ ತಾಲ್ಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಮಠದ ವತಿಯಿಂದ ಆಯೋಜಿಸಿದ್ದ 6ನೇ ವರ್ಷದ ರಾಜ್ಯಮಟ್ಟದ ಅರ್ಚಕರ ವೃತ್ತಿ ಶಿಕ್ಷಣ ಶಿಬಿರದಲ್ಲಿ ಮಾತನಾಡಿದರು.<br /> <br /> ಶ್ರದ್ಧೆ, ಭಕ್ತಿ, ಪೂಜಾ ಕ್ರಮದ ನಿಖರ ಮಾಹಿತಿ ಮುಂತಾದವುಗಳನ್ನು ಅರ್ಚಕ ಹೊಂದಿದ್ದರೆ ದೇವಾಲಯಗಳು ಅಭಿವೃದ್ಧಿ ಹೊಂದುವುದೇ ಅಲ್ಲದೇ ಪುರಾತನ ಸಂಸ್ಕಾರ ಹಾಗೂ ಮೌಲ್ಯಗಳನ್ನು ಉಳಿಸುವಲ್ಲಿ ಕೂಡ ಆತನ ಪಾತ್ರ ಮಹತ್ತರವಾದುದು ಎಂದು ಹೇಳಿದರು.<br /> <br /> ಕಾಲಭೈರವೇಶ್ವರ ಸಂಸ್ಕೃತ ವೇದಾಗಮ ಮಹಾವಿದ್ಯಾಲಯದ ಪ್ರಾಂಶುಪಾಲ ಹಾಗೂ ಶಿಬಿರದ ನಿರ್ದೇಶಕ ಪ್ರೊ.ಸಿ. ನಂಜುಂಡಯ್ಯ, ವಿದ್ವಾಂಸ ಪ್ರೊ.ಎಸ್. ಗೋವಿಂದಭಟ್, ಡಾ.ಮಧುಸೂಧನ ಅಡಿಗ, ಜ್ಯೋತಿಷ ವಿದ್ವಾಂಸ ಡಾ.ಎನ್.ಎಸ್. ವಿಶ್ವಪತಿಶಾಸ್ತ್ರಿ ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>