<p><strong>ವಿಜಾಪುರ</strong>: ‘ಗಾಯತ್ರಿ ಮಂತ್ರ ಪಠಣದಿಂದ ಜ್ಞಾನವೃದ್ಧಿ ಯಾಗುತ್ತದೆ. ದೇಶದಲ್ಲಿ ಗಾಯತ್ರಿ ಜಪಮಾಡುವವರ ಸಂಖ್ಯೆ 10 ಕೋಟಿಗೆ ತಲುಪಿದೆ’ ಎಂದು ತಡಸ ಗಾಯತ್ರಿ ತಪೋಭೂಮಿಯ ಬಾಲಕೃಷ್ಣಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.<br /> <br /> ನಗರದ ಹೊರ ವಲಯದಲ್ಲಿರುವ ರುಕ್ಮಾಂಗದ ಪಂಡಿತರ ಸಮಾಧಿ ಆವರಣದಲ್ಲಿ ಲೋಕ ಕಲ್ಯಾಣಾರ್ಥವಾಗಿ ಭಾನುವಾರ ಹಮ್ಮಿಕೊಂಡಿದ್ದ ಸಾಮೂಹಿಕ ಗಾಯತ್ರಿ ಜಪ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.<br /> <br /> ‘ವೇದ ಮಾತೆ-, ದೇವ ಮಾತೆ ಎಂದೇ ಕರೆಯಲ್ಪಡುವ ಗಾಯತ್ರಿ ಮಾತೆಯನ್ನು ಸ್ತುತಿಸಿದವರಿಲ್ಲ. ದೇವಾನು ದೇವತೆಗಳು– ಋಷಿ-ಮುನಿಗಳು ಸೇರಿದಂತೆ ಹಲವರು ಗಾಯತ್ರಿ ಮಂತ್ರ ಪಠಿಸುವ ಮೂಲಕ ತಮ್ಮ ಇಷ್ಟಾರ್ಥ ಸಿದ್ಧಿಸಿಕೊಂಡ ಉದಾಹರಣೆಗಳಿವೆ. ಹಾಗೆಂದ ಮಾತ್ರಕ್ಕೆ ಉಳಿದ ಮಂತ್ರಗಳ ಶಕ್ತಿಯೇನು ಕಡಿಮೆ ಇಲ್ಲ’ ಎಂದರು.<br /> <br /> ‘ಫೆಬ್ರುವರಿ ತಿಂಗಳು ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕು ರಾಮತೀರ್ಥ(ಕಕಮರಿ)ಯಲ್ಲಿ 22ನೇ ಗಾಯತ್ರಿ ಕೋಟಿ ಜಪ ಯಜ್ಞ ಕಾರ್ಯಕ್ರಮ ಜರುಗಲಿದೆ. ಭಕ್ತರು ಪಾಲ್ಗೊಳ್ಳಬೇಕು’ ಎಂದು ಕೋರಿದರು.<br /> <br /> ರಾಜು ಪದಕಿ, ಪ್ರಕಾಶ ಕುಲಕರ್ಣಿ ಮಾತನಾಡಿದರು. ನಂತರ ನಡೆದ ಶೋಭಾಯಾತ್ರೆಯಲ್ಲಿ ಭಜನಾ ಮಂಡಳಿಯವರು, ಮಹಿಳೆಯರು ಕೋಲಾಟ ಆಡುತ್ತ ಪಾಲ್ಗೊಂಡು ಗಮನ ಸೆಳೆದರು. ಮಹಿಳೆಯರಿಂದ ಗಾಯತ್ರಿ ದೇವಿಗೆ ಕುಂಕುಮಾರ್ಚನೆ ಜರುಗಿತು. ಪಂಡಿತ ವಿಷ್ಣುಪಂತ ಉಪಾಧ್ಯೆ ನೇತೃತ್ವ ವಹಿಸಿದ್ದರು.<br /> <br /> ಚಿಂತಕ ಡಾ.ಗುರುರಾಜ ಕರ್ಜಗಿ ಉಪನ್ಯಾಸ ನೀಡಿದರು. ಆಕಾಶವಾಣಿ ಕಲಾವಿದ ಪಂ. ವೆಂಕಟೇಶಕುಮಾರ ಅವರ ದಾಸವಾಣಿ ಕಾರ್ಯಕ್ರಮ ಜರುಗಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಾಪುರ</strong>: ‘ಗಾಯತ್ರಿ ಮಂತ್ರ ಪಠಣದಿಂದ ಜ್ಞಾನವೃದ್ಧಿ ಯಾಗುತ್ತದೆ. ದೇಶದಲ್ಲಿ ಗಾಯತ್ರಿ ಜಪಮಾಡುವವರ ಸಂಖ್ಯೆ 10 ಕೋಟಿಗೆ ತಲುಪಿದೆ’ ಎಂದು ತಡಸ ಗಾಯತ್ರಿ ತಪೋಭೂಮಿಯ ಬಾಲಕೃಷ್ಣಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.<br /> <br /> ನಗರದ ಹೊರ ವಲಯದಲ್ಲಿರುವ ರುಕ್ಮಾಂಗದ ಪಂಡಿತರ ಸಮಾಧಿ ಆವರಣದಲ್ಲಿ ಲೋಕ ಕಲ್ಯಾಣಾರ್ಥವಾಗಿ ಭಾನುವಾರ ಹಮ್ಮಿಕೊಂಡಿದ್ದ ಸಾಮೂಹಿಕ ಗಾಯತ್ರಿ ಜಪ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.<br /> <br /> ‘ವೇದ ಮಾತೆ-, ದೇವ ಮಾತೆ ಎಂದೇ ಕರೆಯಲ್ಪಡುವ ಗಾಯತ್ರಿ ಮಾತೆಯನ್ನು ಸ್ತುತಿಸಿದವರಿಲ್ಲ. ದೇವಾನು ದೇವತೆಗಳು– ಋಷಿ-ಮುನಿಗಳು ಸೇರಿದಂತೆ ಹಲವರು ಗಾಯತ್ರಿ ಮಂತ್ರ ಪಠಿಸುವ ಮೂಲಕ ತಮ್ಮ ಇಷ್ಟಾರ್ಥ ಸಿದ್ಧಿಸಿಕೊಂಡ ಉದಾಹರಣೆಗಳಿವೆ. ಹಾಗೆಂದ ಮಾತ್ರಕ್ಕೆ ಉಳಿದ ಮಂತ್ರಗಳ ಶಕ್ತಿಯೇನು ಕಡಿಮೆ ಇಲ್ಲ’ ಎಂದರು.<br /> <br /> ‘ಫೆಬ್ರುವರಿ ತಿಂಗಳು ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕು ರಾಮತೀರ್ಥ(ಕಕಮರಿ)ಯಲ್ಲಿ 22ನೇ ಗಾಯತ್ರಿ ಕೋಟಿ ಜಪ ಯಜ್ಞ ಕಾರ್ಯಕ್ರಮ ಜರುಗಲಿದೆ. ಭಕ್ತರು ಪಾಲ್ಗೊಳ್ಳಬೇಕು’ ಎಂದು ಕೋರಿದರು.<br /> <br /> ರಾಜು ಪದಕಿ, ಪ್ರಕಾಶ ಕುಲಕರ್ಣಿ ಮಾತನಾಡಿದರು. ನಂತರ ನಡೆದ ಶೋಭಾಯಾತ್ರೆಯಲ್ಲಿ ಭಜನಾ ಮಂಡಳಿಯವರು, ಮಹಿಳೆಯರು ಕೋಲಾಟ ಆಡುತ್ತ ಪಾಲ್ಗೊಂಡು ಗಮನ ಸೆಳೆದರು. ಮಹಿಳೆಯರಿಂದ ಗಾಯತ್ರಿ ದೇವಿಗೆ ಕುಂಕುಮಾರ್ಚನೆ ಜರುಗಿತು. ಪಂಡಿತ ವಿಷ್ಣುಪಂತ ಉಪಾಧ್ಯೆ ನೇತೃತ್ವ ವಹಿಸಿದ್ದರು.<br /> <br /> ಚಿಂತಕ ಡಾ.ಗುರುರಾಜ ಕರ್ಜಗಿ ಉಪನ್ಯಾಸ ನೀಡಿದರು. ಆಕಾಶವಾಣಿ ಕಲಾವಿದ ಪಂ. ವೆಂಕಟೇಶಕುಮಾರ ಅವರ ದಾಸವಾಣಿ ಕಾರ್ಯಕ್ರಮ ಜರುಗಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>