<p>ಚಿಕ್ಕಬಳ್ಳಾಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಶಾಸಕ ಡಾ. ಕೆ.ಸುಧಾಕರ್ ಮಾ.11ರಿಂದ 14ರವರೆಗೆ ಕ್ಷೇತ್ರ ವ್ಯಾಪ್ತಿಯಲ್ಲಿ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎಸ್.ಪಿ.ಶ್ರೀನಿವಾಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.<br /> <br /> ಮಾ.11ರ ಬೆಳಿಗ್ಗೆ 8ಕ್ಕೆ ನಂದಿ ದೇಗುಲದಿಂದ ಆರಂಭಗೊಳ್ಳುವ ಪಾದಯಾತ್ರೆ ರಾತ್ರಿ 8.15ಕ್ಕೆ ಹೊಸಹುಡ್ಯದಲ್ಲಿ ಕೊನೆಗೊಳ್ಳಲಿದೆ. 12ರಂದು ಹೊಸಹುಡ್ಯದಿಂದ ವಾಪಸಂದ್ರದವರೆಗೆ, 13ಕ್ಕೆ ವಾಪಸಂದ್ರದಿಂದ ಮಂಡಿಕಲ್ಲು ಮತ್ತು 14ಕ್ಕೆ ಕಾಡಚಿಕ್ಕನಹಳ್ಳಿಯಿಂದ ಕಾಮರೆಡ್ಡಿಹಳ್ಳಿಯವರೆಗೆ ಪಾದಯಾತ್ರೆ ನಡೆಯಲಿದೆ ಭಾನುವಾರ ತಿಳಿಸಿದರು.<br /> <br /> ಕಾಂಗ್ರೆಸ್ ನಾಯಕರ ಸೂಚನೆಯ ಮೇರೆಗೆ ರಾಜ್ಯದಾದ್ಯಂತ ಈ ರೀತಿಯ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಮಟ್ಟದ ಯುವ ಕಾಂಗ್ರೆಸ್ ಸಮಾವೇಶವನ್ನು ಮಾ.15ರಂದು ದೇವನಹಳ್ಳಿಯಲ್ಲಿ ನಡೆಸಲಾಗುವುದು. <br /> <br /> ಸಮಾವೇಶದಲ್ಲಿ ಸಚಿವ ಕೃಷ್ಣ ಬೈರೇಗೌಡ, ಶಾಸಕ ಸಂತೋಷ್ ಲಾಡ್ ಮುಂತಾದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. <br /> <br /> ಕಾರ್ಯಕರ್ತರಾದ ಜಿಯಾಉಲ್ಲಾ, ಸಂತೋಷ್ರಾಜ್, ತಿರುಮಳಪ್ಪ, ನರಸಿಂಹಮೂರ್ತಿ, ಅರ್ಜುನ್, ಬಾಲು, ರಾಜೇಶ್, ಗಂಗರಾಜು, ಬಾಬಾಜಾನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಕ್ಕಬಳ್ಳಾಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಶಾಸಕ ಡಾ. ಕೆ.ಸುಧಾಕರ್ ಮಾ.11ರಿಂದ 14ರವರೆಗೆ ಕ್ಷೇತ್ರ ವ್ಯಾಪ್ತಿಯಲ್ಲಿ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎಸ್.ಪಿ.ಶ್ರೀನಿವಾಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.<br /> <br /> ಮಾ.11ರ ಬೆಳಿಗ್ಗೆ 8ಕ್ಕೆ ನಂದಿ ದೇಗುಲದಿಂದ ಆರಂಭಗೊಳ್ಳುವ ಪಾದಯಾತ್ರೆ ರಾತ್ರಿ 8.15ಕ್ಕೆ ಹೊಸಹುಡ್ಯದಲ್ಲಿ ಕೊನೆಗೊಳ್ಳಲಿದೆ. 12ರಂದು ಹೊಸಹುಡ್ಯದಿಂದ ವಾಪಸಂದ್ರದವರೆಗೆ, 13ಕ್ಕೆ ವಾಪಸಂದ್ರದಿಂದ ಮಂಡಿಕಲ್ಲು ಮತ್ತು 14ಕ್ಕೆ ಕಾಡಚಿಕ್ಕನಹಳ್ಳಿಯಿಂದ ಕಾಮರೆಡ್ಡಿಹಳ್ಳಿಯವರೆಗೆ ಪಾದಯಾತ್ರೆ ನಡೆಯಲಿದೆ ಭಾನುವಾರ ತಿಳಿಸಿದರು.<br /> <br /> ಕಾಂಗ್ರೆಸ್ ನಾಯಕರ ಸೂಚನೆಯ ಮೇರೆಗೆ ರಾಜ್ಯದಾದ್ಯಂತ ಈ ರೀತಿಯ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಮಟ್ಟದ ಯುವ ಕಾಂಗ್ರೆಸ್ ಸಮಾವೇಶವನ್ನು ಮಾ.15ರಂದು ದೇವನಹಳ್ಳಿಯಲ್ಲಿ ನಡೆಸಲಾಗುವುದು. <br /> <br /> ಸಮಾವೇಶದಲ್ಲಿ ಸಚಿವ ಕೃಷ್ಣ ಬೈರೇಗೌಡ, ಶಾಸಕ ಸಂತೋಷ್ ಲಾಡ್ ಮುಂತಾದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. <br /> <br /> ಕಾರ್ಯಕರ್ತರಾದ ಜಿಯಾಉಲ್ಲಾ, ಸಂತೋಷ್ರಾಜ್, ತಿರುಮಳಪ್ಪ, ನರಸಿಂಹಮೂರ್ತಿ, ಅರ್ಜುನ್, ಬಾಲು, ರಾಜೇಶ್, ಗಂಗರಾಜು, ಬಾಬಾಜಾನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>