<p><strong>ಬೆಂಗಳೂರು</strong>: `ನಗರದ ವಿವಿಧೆಡೆ ಅತಿಕ್ರಮಣಗೊಂಡಿದ್ದ ರೂ. 122 ಕೋಟಿ ಮೊತ್ತದ ಸಾರ್ವಜನಿಕ ಆಸ್ತಿಯನ್ನು ಕಳೆದ ಹತ್ತು ತಿಂಗಳ ಅವಧಿಯಲ್ಲಿ ವಶಕ್ಕೆ ಪಡೆಯಲಾಗಿದೆ~ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಾಗೂ ಬೆಂಗಳೂರು ಮಹಾನಗರ ಕಾರ್ಯ ಪಡೆ (ಬಿಎಂಟಿಎಫ್) ಮುಖ್ಯಸ್ಥ ಆರ್.ಪಿ. ಶರ್ಮಾ ತಿಳಿಸಿದರು.<br /> <br /> ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, `ಈ ವರ್ಷ ಇಲ್ಲಿಯವರೆಗೆ 194 ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 44 ಪ್ರಕರಣಗಳ ಆರೋಪ ಪಟ್ಟಿ ಸಲ್ಲಿಸಲಾಗಿದ್ದು, ಉಳಿದವು ತನಿಖೆ ಹಂತದಲ್ಲಿವೆ~ ಎಂದು ಹೇಳಿದರು.<br /> <br /> `ಸುತಗಂಟ್ಯ ಪಾಳ್ಯದಲ್ಲಿ ಅತಿಕ್ರ ಮಣಗೊಂಡಿದ್ದ ರೂ 60 ಕೋಟಿ ಮೌಲ್ಯದ 1.25 ಎಕರೆ ಬಿಬಿಎಂಪಿ ಭೂಮಿಯನ್ನು ವಶಕ್ಕೆ ಪಡೆಯಲಾಗಿದ್ದು, ವಿವಿಧೆಡೆ ಖಾಸಗಿ ವ್ಯಕ್ತಿಗಳ ಪಾಲಾಗಿದ್ದ ರೂ 62 ಕೋಟಿ ಮೌಲ್ಯದ ಸಾರ್ವಜನಿಕ ಆಸ್ತಿಯನ್ನೂ ಪತ್ತೆ ಹಚ್ಚಲಾಗಿದೆ~ ಎಂದು ವಿವರಿಸಿದರು.<br /> <br /> `ಬಿಎಂಟಿಎಫ್ ಸ್ಥಾಪನೆಯಾದ ದಿನದಿಂದ ಕಳೆದ ವರ್ಷದ ಅಂತ್ಯದವರೆಗೆ ಅನ್ಯರ ಪಾಲಾಗಿದ್ದ ರೂ 3,000 ಕೋಟಿ ಮೌಲ್ಯದ ಸರ್ಕಾರದ ಆಸ್ತಿ ಪತ್ತೆ ಮಾಡಲಾಗಿದೆ~ ಎಂದ ತಿಳಿಸಿದರು. `60 ಎಕರೆ ವಿಸ್ತೀರ್ಣದ ಒಡೆಯರಹಳ್ಳಿ ಕೆರೆಯ ಅತಿಕ್ರಮಣವನ್ನು ತಡೆಗಟ್ಟಲಾಗಿದ್ದು, ಅಲ್ಲಿ ನಡೆಯುತ್ತಿದ್ದ ಮರಳು ದಂಧೆಯನ್ನೂ ನಿಲ್ಲಿಸಲಾಗಿದೆ. ಈ ದಂಧೆಯ ಹಿಂದೆ ಹಲವರ ಕೈವಾಡ ಇದೆ~ ಎಂದು ಹೇಳಿದರು.<br /> <br /> `ಪ್ರಸಕ್ತ ವರ್ಷ ನಿಯಮಾವಳಿ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿದ 558 ಪ್ರಕರಣಗಳು ದಾಖಲಾಗಿದ್ದು, ಅವುಗಳ ತನಿಖೆ ನಡೆಸಲಾಗುತ್ತಿದೆ~ ಎಂದು ಮಾಹಿತಿ ನೀಡಿದರು. <br /> <br /> ದೊಡ್ಡಗುಬ್ಬಿಯ ತಮ್ಮ ಒಡೆತನದ ಜಾಗೆಯಲ್ಲಿ ಪಾಲಿಕೆ ಎಂಜಿನಿಯರ್ಗಳು ಅತಿಕ್ರಮವಾಗಿ ಪ್ರವೇಶ ಮಾಡಿದ್ದರು ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶರ್ಮಾ ಪ್ರತಿಕ್ರಿಯಿಸಲು ನಿರಾಕರಿಸಿದರು. ಸಚಿವ ಎಸ್.ಸುರೇಶಕುಮಾರ್ ವಿರುದ್ಧ ದಾಖಲಾದ ಪ್ರಕರಣದ ಕುರಿತೂ ಪ್ರತಿಕ್ರಿಯಿಸಲಿಲ್ಲ.</p>.<p><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: `ನಗರದ ವಿವಿಧೆಡೆ ಅತಿಕ್ರಮಣಗೊಂಡಿದ್ದ ರೂ. 122 ಕೋಟಿ ಮೊತ್ತದ ಸಾರ್ವಜನಿಕ ಆಸ್ತಿಯನ್ನು ಕಳೆದ ಹತ್ತು ತಿಂಗಳ ಅವಧಿಯಲ್ಲಿ ವಶಕ್ಕೆ ಪಡೆಯಲಾಗಿದೆ~ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಾಗೂ ಬೆಂಗಳೂರು ಮಹಾನಗರ ಕಾರ್ಯ ಪಡೆ (ಬಿಎಂಟಿಎಫ್) ಮುಖ್ಯಸ್ಥ ಆರ್.ಪಿ. ಶರ್ಮಾ ತಿಳಿಸಿದರು.<br /> <br /> ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, `ಈ ವರ್ಷ ಇಲ್ಲಿಯವರೆಗೆ 194 ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 44 ಪ್ರಕರಣಗಳ ಆರೋಪ ಪಟ್ಟಿ ಸಲ್ಲಿಸಲಾಗಿದ್ದು, ಉಳಿದವು ತನಿಖೆ ಹಂತದಲ್ಲಿವೆ~ ಎಂದು ಹೇಳಿದರು.<br /> <br /> `ಸುತಗಂಟ್ಯ ಪಾಳ್ಯದಲ್ಲಿ ಅತಿಕ್ರ ಮಣಗೊಂಡಿದ್ದ ರೂ 60 ಕೋಟಿ ಮೌಲ್ಯದ 1.25 ಎಕರೆ ಬಿಬಿಎಂಪಿ ಭೂಮಿಯನ್ನು ವಶಕ್ಕೆ ಪಡೆಯಲಾಗಿದ್ದು, ವಿವಿಧೆಡೆ ಖಾಸಗಿ ವ್ಯಕ್ತಿಗಳ ಪಾಲಾಗಿದ್ದ ರೂ 62 ಕೋಟಿ ಮೌಲ್ಯದ ಸಾರ್ವಜನಿಕ ಆಸ್ತಿಯನ್ನೂ ಪತ್ತೆ ಹಚ್ಚಲಾಗಿದೆ~ ಎಂದು ವಿವರಿಸಿದರು.<br /> <br /> `ಬಿಎಂಟಿಎಫ್ ಸ್ಥಾಪನೆಯಾದ ದಿನದಿಂದ ಕಳೆದ ವರ್ಷದ ಅಂತ್ಯದವರೆಗೆ ಅನ್ಯರ ಪಾಲಾಗಿದ್ದ ರೂ 3,000 ಕೋಟಿ ಮೌಲ್ಯದ ಸರ್ಕಾರದ ಆಸ್ತಿ ಪತ್ತೆ ಮಾಡಲಾಗಿದೆ~ ಎಂದ ತಿಳಿಸಿದರು. `60 ಎಕರೆ ವಿಸ್ತೀರ್ಣದ ಒಡೆಯರಹಳ್ಳಿ ಕೆರೆಯ ಅತಿಕ್ರಮಣವನ್ನು ತಡೆಗಟ್ಟಲಾಗಿದ್ದು, ಅಲ್ಲಿ ನಡೆಯುತ್ತಿದ್ದ ಮರಳು ದಂಧೆಯನ್ನೂ ನಿಲ್ಲಿಸಲಾಗಿದೆ. ಈ ದಂಧೆಯ ಹಿಂದೆ ಹಲವರ ಕೈವಾಡ ಇದೆ~ ಎಂದು ಹೇಳಿದರು.<br /> <br /> `ಪ್ರಸಕ್ತ ವರ್ಷ ನಿಯಮಾವಳಿ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿದ 558 ಪ್ರಕರಣಗಳು ದಾಖಲಾಗಿದ್ದು, ಅವುಗಳ ತನಿಖೆ ನಡೆಸಲಾಗುತ್ತಿದೆ~ ಎಂದು ಮಾಹಿತಿ ನೀಡಿದರು. <br /> <br /> ದೊಡ್ಡಗುಬ್ಬಿಯ ತಮ್ಮ ಒಡೆತನದ ಜಾಗೆಯಲ್ಲಿ ಪಾಲಿಕೆ ಎಂಜಿನಿಯರ್ಗಳು ಅತಿಕ್ರಮವಾಗಿ ಪ್ರವೇಶ ಮಾಡಿದ್ದರು ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶರ್ಮಾ ಪ್ರತಿಕ್ರಿಯಿಸಲು ನಿರಾಕರಿಸಿದರು. ಸಚಿವ ಎಸ್.ಸುರೇಶಕುಮಾರ್ ವಿರುದ್ಧ ದಾಖಲಾದ ಪ್ರಕರಣದ ಕುರಿತೂ ಪ್ರತಿಕ್ರಿಯಿಸಲಿಲ್ಲ.</p>.<p><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>