ನವದೆಹಲಿ, (ಪಿಟಿಐ): ~ಮೊದಲು ಬಂದವರಿಗೆ ಮೊದಲ ಆದ್ಯತೆ~ ನಿಯಮದ ಆಧಾರದ ಮೇಲೆ ನೀಡಿದ 2ಜಿ ತರಂಗಾಂತರ ಹಂಚಿಕೆಗಳನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದ ಕ್ರಮ, ಗಣಿಗಾರಿಕೆ ಸೇರಿದಂತೆ ಇತರೆ ಕ್ಷೇತ್ರಗಳ ಮೇಲೂ ಸಂಕೀರ್ಣವಾದ ಪರಿಣಾಮ ಬೀರಬಹುದು ಎಂದು ಟೆಲಿಕಾಂ ಸಚಿವ ಕಪಿಲ್ ಸಿಬಲ್ ಅವರು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಸರ್ಕಾರ ನೀಡಿದ್ದ 2 ಜಿ~ ತರಂಗಾಂತರ ಹಂಚಿಕೆಯ ಹಗರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಇತ್ತೀಚೆಗೆ 122 ಪರವಾನಗಿಗಳನ್ನು ರದ್ದುಪಡಿಸಿ ತೀರ್ಪು ನೀಡಿತ್ತು.