ಬೆಂಗಳೂರು: ಸಾಗರದ ಲೋಹಿಯಾ ಪ್ರತಿಷ್ಠಾನವು ಕುವೆಂಪು ಪ್ರತಿಷ್ಠಾನದ ಸಹಯೋಗದೊಂದಿಗೆ ಇದೇ 20 ಹಾಗೂ 21ರಂದು ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ `ಸಮಾಜವಾದಿ ಅಧ್ಯಯನ~ ಶಿಬಿರ ಆಯೋಜಿಸಿದೆ.
ಈ ಬಾರಿಯ ಶಿಬಿರದ ಅಧ್ಯಯನ ವಿಷಯ `ಗಾಂಧಿ ಮತ್ತು ಸಮಾಜವಾದ~. ಈ ಕುರಿತು ನಾಡಿನ ಚಿಂತಕರು, ಹೋರಾಟಗಾರರು ಎರಡು ದಿನಗಳಲ್ಲಿ ಏಳು ಗೋಷ್ಠಿಗಳಲ್ಲಿ ಚರ್ಚೆ ನಡೆಸಲಿದ್ದಾರೆ. ಭಾಗವಹಿಸುವ ಶಿಬಿರಾರ್ಥಿಗಳಿಗೆ 150 ರೂಪಾಯಿ ಶುಲ್ಕ ನಿಗದಿ ಮಾಡಲಾಗಿದೆ. ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ 100 ರೂಪಾಯಿ ಶುಲ್ಕ ನಿಗದಿ ಮಾಡಲಾಗಿದೆ.
ಆಸಕ್ತರು ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಇದೇ 10 ಕೊನೆಯ ದಿನ. ಹೆಚ್ಚಿನ ಮಾಹಿತಿಗೆ: 97319 29731 ಅಥವಾ 94482 38638 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಲೋಹಿಯಾ ಜನ್ಮಶತಾಬ್ದಿ ಪ್ರತಿಷ್ಠಾನದ ಅಧ್ಯಕ್ಷ ಡಿ.ಎಸ್. ನಾಗಭೂಷಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.