~ ರಾಜಾ ಅವರು ಸಲ್ಲಿಸಿದ್ದ ಜಾಮೀನು ಮನವಿ ಅರ್ಜಿಯನ್ನು ಪುರಸ್ಕರಿಸಲಾಗಿದೆ~ ಎಂದು ವಿಶೇಷ ಸಿಬಿಐ ನ್ಯಾಯಾಧೀಶ ಒ.ಪಿ. ಸೈನಿ ಅವರು ಹೇಳಿದರು.
ಷರತ್ತಿನ ಪ್ರಕಾರ ರಾಜಾ ಅವರು ರೂ. 20 ಲಕ್ಷ ಮೊತ್ತದ ವ್ಯೆಯಕ್ತಿಕ ಬಾಂಡ್ ನೀಡಬೇಕು ಹಾಗೂ ಇಬ್ಬರಿಂದ ಅಷ್ಟೇ ಮೊತ್ತದ ಭದ್ರತಾ ಠೇವಣೆಯನ್ನು ನೀಡಬೇಕು. ಜೊತೆಗೆ ನ್ಯಾಯಾಲಯದ ಅನುಮತಿ ಇಲ್ಲದೇ ತಮಿಳುನಾಡಿಗೆ ಹಾಗೂ ಟೆಲಿಕಾಂ ಕಚೇರಿಗೆ ಭೇಟಿ ನೀಡುವಂತಿಲ್ಲ.
ಇದಲ್ಲದೇ ರಾಜಾ ಅವರು ಯಾವುದೇ ಕಾರಣಕ್ಕೂ ಸಾಕ್ಷಿಗಳ ಮೇಲೆ ತಮ್ಮ ಪ್ರಭಾವವನ್ನು ಬೀರಬಾರದು ಎಂಬ ಷರತ್ತನ್ನೂ ನ್ಯಾಯಾಲಯವು ತನ್ನ 14 ಪುಟಗಳ ಆದೇಶದಲ್ಲಿ ವಿಧಿಸಿದೆ.