ಬೀದರ್: ಫ್ರಾನ್ಸ್ನಲ್ಲಿ ನಡೆದ ಪ್ಯಾರಾ ಕ್ಲೈಂಬಿಂಗ್ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ, ಚಿನ್ನದ ಪದಕ ಪುರಸ್ಕತರಾದ ಮಣಿಕಂಠನ್ ಅವರನ್ನು ನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಸೋಮವಾರ ಏರ್ಪಡಿಸಿದ ಸಮಾರಂಭದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸಂಘಟಕರ ಪರವಾಗಿ ಮಣಿಕಂಠನ್ ಅವರನ್ನು ಗೌರವಿಸಿದ ಸ್ವಾಮಿ ಸುಭಾಷಾನಂದ ತೀರ್ಥ ಮಹಾರಾಜರು ವೈಯಕ್ತಿವಾಗಿಯೂ ಆರ್ಥಿಕ ನೆರವು ನೀಡಿ ಅಭಿನಂದಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮಣಿಕಂಠನ್, ಸುಭಾಷಾನಂದತೀರ್ಥ ಸ್ವಾಮೀಜಿ ನನ್ನ ಸಾಧನೆಗೆ ಮೆಚ್ಚಿ ಗೌರವಿಸಿದ್ದು ಇನ್ನಷ್ಟು ಉತ್ತೇಜನ ನೀಡಿದೆ. ಅಂಗವಿಕಲ ಅಭ್ಯರ್ಥಿಗಳಿಗೆ ಇಂಥ ಉತ್ತೇಜನ ಅಗತ್ಯವಾಗಿದೆ ಎಂದರು.
ಕ್ರೀಡಾ ಕ್ಷೇತ್ರದ ಸಾಧಕರಿಗೆ ಸಾಧಕರಿಗೆ ಗುರುತಿಸಿ ಗೌರವಿಸುವ ಕಾರ್ಯ ಸಮಾಜದಲ್ಲಿ ನಡೆಯಬೇಕು ಎಂದು ಎಂದು ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ಶರಣಪ್ಪ ಮೀಠಾರೆ ಹೇಳಿದರು.