ಆರ್. ವಿನಯಕುಮಾರ್ ಮತ್ತು ಅಭಿಮನ್ಯು ಮಿಥುನ್ ಗಾಯಗೊಂಡ ಕಾರಣ, ಚೆನ್ನೈನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು. ಕಳೆದ ಮೂರು ಪಂದ್ಯಗಳಿಂದ 14 ವಿಕೆಟ್ ಗಳಿಸಿರುವ ಶರತ್ ಭರ್ಜರಿ ಪ್ರದರ್ಶನ ನೀಡಿದ್ದಾರೆ.
`ನಾನು ಮೈಸೂರಿನಲ್ಲಿ ಬಹಳಷ್ಟು ಪಂದ್ಯಗಳನ್ನು ಆಡಿದ್ದೇನೆ. 19 ವರ್ಷದೊಳಗಿನ ಟೂರ್ನಿಯಲ್ಲಿ ಕರ್ನಾಟಕವನ್ನು ಇದೇ ಮೈದಾನದಲ್ಲಿ ಪ್ರತಿನಿಧಿಸಿದ್ದೆೆ' ಎಂದು ಹೇಳಿದ ಶರತ್, `ಈ ಮೈದಾನದಲ್ಲಿ ಮೊದಲ ಬಾರಿ ರಣಜಿ ಪಂದ್ಯ ಆಡುತ್ತಿರುವುದು ಸಂತಸ ತಂದಿದೆ. ಹೊಸ ಪೆವಿಲಿಯನ್, ನೆಟ್ಸ್ ಮತ್ತಿತರ ಸೌಲಭ್ಯಗಳು ಅಭಿವೃದ್ಧಿಯಾಗಿರುವುದು ಚೆನ್ನಾಗಿವೆ' ಎಂದರು.
ಇದಕ್ಕೂ ಮುನ್ನ ಶರತ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ತರಬೇತುದಾರ ಜೆ. ಅರುಣಕುಮಾರ್, `ಈ ಋತುವಿನ ಶೋಧ ಶರತ್. ಬಹಳ ಪ್ರತಿಭಾವಂತ ಹಾಗೂ ಕಠಿಣ ಪರಿಶ್ರಮಪಡಬಲ್ಲ ಆಟಗಾರ. ಉತ್ತಮ ಭವಿಷ್ಯವಿದೆ' ಎಂದರು.