ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಹುರುಪಿನಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಅನಿಸುತ್ತಿದೆ.
ರೂ.1ಗೆ ಒಂದು ಕೆಜಿ ಅಕ್ಕಿ, ಅಗ್ಗದ ದರದಲ್ಲಿ ಸಾರಾಯಿ ಪೂರೈಸುವಂತೆ ಹೇಳಿರುವುದು ಮತ್ತು ತಾಲ್ಲೂಕುಗಳ ರಚನೆಯನ್ನು ರದ್ದು ಮಾಡಲು ಚಿಂತಿಸುತ್ತಿರುವುದನ್ನು ಗಮನಿಸಿದರೆ ಅವರು ಅವಸರದಲ್ಲಿ ಆಡಳಿತ ನಡೆಸುತ್ತಿದ್ದಾರೆ ಎಂದು ಹೇಳಬಹುದು. ಅವರು ಈ ರೀತಿ ಜನರ ಹಿತವನ್ನು ಗಮನಿಸದೇ ಮುನ್ನುಗ್ಗುತ್ತಿರುವುದು ಅಸಮಂಜಸವಾದುದು.