ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣಾ ಉಪವಾಸ ಅಂತ್ಯ

Last Updated 18 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ರಾಳೆಗಣಸಿದ್ದಿ(ಪಿಟಿಐ/ ಐಎಎ­ನ್‌­ಎಸ್‌): ಲೋಕಪಾಲ ಮಸೂದೆಗೆ ಲೋಕ­ಸಭೆಯಲ್ಲಿ ಬುಧವಾರ ಅಂಗೀಕಾರ ದೊರೆಯುತ್ತಿದ್ದಂತೆ ಮಹಾರಾಷ್ಟ್ರದ ರಾಳೆಗಣಸಿದ್ದಿಯಲ್ಲಿ ಸಂಭ್ರಮಾಚರಣೆ ಮನೆ ಮಾಡಿತು.

ಮಸೂದೆ ಅಂಗೀಕಾರಕ್ಕೆ ಒತ್ತಾಯಿಸಿ  9 ದಿನಗಳಿಂದ ಸಾಮಾಜಿಕ ಕಾರ್ಯ­ಕರ್ತ ಅಣ್ಣಾಹಜಾರೆ ನಡೆಸು­ತ್ತಿದ್ದ ಉಪ­ವಾಸ ಅಂತ್ಯಗೊ­ಳಿಸಿದರು.  ಲೋಕಪಾಲ ಜಾರಿಯಾದ ನಂತರ ಹೇಗೆ ಕಾರ್ಯ­ನಿರ್ವ­ಹಿಸಲಿದೆ ಎಂಬುದರ ಮೇಲೆ ಕಣ್ಣಿಡಲು ‘ಕಳಂಕಿತ­ವಲ್ಲದ ಪ್ರಾಮಾ­­­ಣಿಕ’ ಜನರನ್ನು ಒಳ­ಗೊಂಡ ಕಣ್ಗಾವಲು ಸಮಿತಿ ರಚಿಸು­ವು­ದಾಗಿ ಅವರು ಘೋಷಣೆ ಮಾಡಿ­ದ್ದಾರೆ. ಇದ­ರಲ್ಲಿ ನಿವೃತ್ತ ನ್ಯಾಯ­ಮೂರ್ತಿಗಳು, ರಾಜ್ಯದ ಪೊಲೀಸ್‌ ಮುಖ್ಯಸ್ಥರು ಇರುತ್ತಾರೆ.

ಉಪವಾಸ ನಡೆಸುತ್ತಿದ್ದರಿಂದ 76 ವರ್ಷದ ಹಜಾರೆ ಆರೋಗ್ಯದಲ್ಲಿ ಏರುಪೇ­ರಾಗಿದ್ದರೂ ಲೋಕಸಭೆಯಲ್ಲಿ ಲೋಕ­ಪಾಲಕ್ಕೆ ಅಂಗೀಕಾರ ದೊರೆತ ಕೂಡಲೇ ಅವರು ಚೈತನ್ಯದ ಚಿಲುಮೆಯಾದರು. ಅವರ ಮುಖ ದಲ್ಲಿ ಉತ್ಸಾಹ ಚಿಮ್ಮಿತು. ಸಾವಿರಾರು ಅಣ್ಣಾ ಬೆಂಬಲಿಗರ ಹರ್ಷೋದ್ಗಾರ ಮುಗಿಲು ಮುಟ್ಟಿತು.

ಅಣ್ಣಾ ಅಸಮಾಧಾನ: ಲೋಕಪಾಲ ಮಸೂದೆ ಅಂಗೀಕಾರ ವಾಗಲು ಸಹಕರಿಸಿದ ಎಲ್ಲ ಪಕ್ಷದ ಮುಖಂಡರಿಗೆ ಅಣ್ಣಾ ಕೃತಜ್ಞತೆ ಸಲ್ಲಿಸಿದರು. ಆದರೆ  ಲೋಕಪಾಲವನ್ನು ‘ಜೋಕ್‌ಪಾಲ್‌’ ಎಂದು ಟೀಕಿಸಿದ್ದ  ಆಮ್‌ ಆದ್ಮಿ ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಕ್ಯಾಮೆರಾ ಎದುರು ನಿಲ್ಲುವುದಿಲ್ಲ: ವಿಜಯೋತ್ಸವ ಭಾಷಣ ಆರಂಭಿಸುವು ದಕ್ಕಿಂತಲೂ ಮೊದಲು ಅಣ್ಣಾ ಹಜಾರೆ ಕ್ಯಾಮೆರಾ ಮುಂದೆ ನಿಲ್ಲುವ ಕೆಲವು ನಾಯಕರ ಬಗ್ಗೆ ಅಸಮಾಧಾನ ವ್ಯಕ್ತಪಡಿ­ಸಿದರು. ಕೇಜ್ರಿವಾಲ್‌ ಹಾಗೂ ಅವರ ಬೆಂಬಲಿಗರ ಬಗ್ಗೆ ಕೋಪ ವ್ಯಕ್ತ­ಪಡಿ­ಸಿದರು.

‘ಕ್ಯಾಮೆರಾಕ್ಕೆ ಪೋಸು ನೀಡುವ ನಾಯಕರಿಂದ ದೇಶಕ್ಕೆ ಲಾಭ­ವಿಲ್ಲ. ನಾನು ಹಾಗೆ ಮಾಡಿದ್ದರೆ ಇಲ್ಲಿಯ­ವರೆಗೆ ಬರುತ್ತಿರಲಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT