ಕೊಟ್ಟಾಯಂ(ಪಿಟಿಐ): ಸೋಮಾಲಿಯಾ ಕಡಲ್ಗಳ್ಳರಿಂದ ಅಪಹರಣಕ್ಕೊಳಗಾಗಿದೆಯೆಂದು ಶಂಕಿಸಲಾದ ಇಟಲಿ ಮೂಲಕ ತೈಲ ಟ್ಯಾಂಕರ್ ಎಲ್ಲಿ ಲಂಘರು ಹಾಕಿದೆಯೆಂದು ಪತ್ತೆ ಹಚ್ಚುವಂತೆ ರಕ್ಷಣಾ ಸಚಿವ ಎ.ಕೆ. ಆಂಟನಿ ಭದ್ರತಾ ಪಡೆಗಳಿಗೆ ಸೂಚಿಸಿದ್ದಾರೆ. ಹಡಗಿನಲ್ಲಿದ್ದ ಕೇರಳ ಮೂಲದ ನಾವಿಕರೊಬ್ಬರ ಸಂಬಂಧಿಗಳು ರಕ್ಷಣಾ ಸಚಿವ ಎ.ಕೆ. ಆಂಟನಿಯವರನ್ನು ಸಂಪರ್ಕಿಸಿದ ಹಿನ್ನೆಲೆಯಲ್ಲಿ ಅವರು ಈ ಕ್ರಮ ಕೈಗೊಂಡಿದ್ದಾರೆ.