ಸಂಚಾರಿ ದಟ್ಟಣೆ ತಪ್ಪಿಸುವ ಉದ್ದೇಶದಿಂದ ಹೊಸಕೋಟೆ ಮುಖ್ಯ ಬಸ್ ನಿಲ್ದಾಣವನ್ನು ಚನ್ನಬೈರೇಗೌಡ ಕ್ರೀಡಾಂಗಣದ ಬಳಿಗೆ ಬದಲಾಯಿಸಿ ತಿಂಗಳುಗಳೇ ಕಳೆದಿದೆ. ಆದರೆ ರಾಷ್ಟ್ರೀಯ ಹೆದ್ದಾರಿಯ ಮಧ್ಯದಲ್ಲೇ ಬಸ್ ನಿಲ್ದಾಣವನ್ನು ಮಾಡಿರುವ ಕಾರಣ ರಸ್ತೆ ಮಧ್ಯೆ ಬಸ್ಗಳು ನಿಲ್ಲುತ್ತವೆ.
ಜೊತೆಗೆ ನೂರು ಮೀಟರ್ ದೂರದಲ್ಲೇ ಪೊಲೀಸ್ ಠಾಣೆ ಇದ್ದು, ಅಪಘಾತಕ್ಕೊಳಗಾದ ವಾಹನಗಳನ್ನು ರಸ್ತೆ ಮೇಲೆ ನಿಲ್ಲಿಸಲಾಗಿದೆ. ಇದರಿಂದಾಗಿ ರಸ್ತೆ ದಾಟುವವರಿಗೆ ತುಂಬಾ ತೊಂದರೆಯಾಗಿದೆ. ಸಂಬಂಧಪಟ್ಟವರು ಈ ಕೂಡಲೇ ಈ ಸಮಸ್ಯೆ ನಿವಾರಿಸಬೇಕಾಗಿ ವಿನಂತಿ.