ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ ಜನರು ನಗರ ತೊರೆಯುವ ಅಗತ್ಯವಿಲ್ಲ

Last Updated 16 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಈಶಾನ್ಯ ರಾಜ್ಯದ ಜನರಿಗೆ ಬೆಂಗಳೂರು ಸುರಕ್ಷಿತವಾಗಿದೆ. ಅಸ್ಸಾಂ ಜನರು ನಗರ ಬಿಡುವ ಅಗತ್ಯವಿಲ್ಲ~ ಎಂದು ಬೆಂಗಳೂರು ಅಸ್ಸಾಂ ಸೊಸೈಟಿ ಪ್ರಧಾನ ಕಾರ್ಯದರ್ಶಿ ಪ್ರಂಜಲ್ ಮೇಧಿ ಹೇಳಿದರು.

`ಬೆಂಗಳೂರು ನಗರದಲ್ಲಿಯೇ 40 ಸಾವಿರ ಅಸ್ಸಾಂ ಮೂಲದ ಜನ ನೆಲೆಸಿದ್ದಾರೆ. ಹಿಂದಿನಿಂದಲೂ ರಾಜ್ಯದಲ್ಲಿ ಅಸ್ಸಾಂ ಜನರು ಸುರಕ್ಷಿತವಾಗಿದ್ದಾರೆ. ಸೊಸೈಟಿಯು 1998ರಿಂದ ಅಸ್ಸಾಂ ವಲಸಿಗರ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಸೊಸೈಟಿಗೆ 7 ಸಾವಿರ ಜನ ಸದಸ್ಯರಿದ್ದಾರೆ~ ಎಂದು ತಿಳಿಸಿದರು.
 
`ಅಸ್ಸಾಂನಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ, ನಗರದಲ್ಲಿ ಯಾವುದೇ ಒಂದು ಸಮುದಾಯದ ಮೇಲೆ ಸಂಶಯಪಟ್ಟು ಬೆಂಗಳೂರು ತೊರೆಯುವ ಯಾವುದೇ ಘಟನೆಗಳು ನಡೆದಿಲ್ಲ~ ಎಂದು ಅಭಿಪ್ರಾಯಪಟ್ಟರು.

`ಹೆಚ್ಚಿನ ಸಂಖ್ಯೆ ಜನರು ಮಾಲ್‌ಗಳಲ್ಲಿ, ಹೋಟೆಲ್, ಸೆಕ್ಯುರಿಟಿ ಗಾರ್ಡ್‌ಗಳಾಗಿ ಕೆಲಸವನ್ನು ಮಾಡುತ್ತಿದ್ದಾರೆ. ಅಲ್ಲದೇ, ಸಾಕಷ್ಟು ಪ್ರಮಾಣದಲ್ಲಿ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ ಹೇಳಿದರು.

`ಜನರು ಸರ್ಕಾರದ ಮೇಲೆ ನಂಬಿಕೆಯನ್ನಿಡಬೇಕು. ಅವರಿಗೆ ಅಗತ್ಯ ನೆರವನ್ನು ಸರ್ಕಾರ ನೀಡಲು ಸಿದ್ಧವಿದೆ. ವದಂತಿಗಳನ್ನು ನಂಬಿ ಅವಸರವಾಗಿ ನಿರ್ಧಾರ ಕೈಗೊಳ್ಳುವ ಅವಶ್ಯಕತೆಯಿಲ್ಲ. ಯಾರಿಗಾದರೂ ತೊಂದರೆಯಾಗಿದ್ದರೆ, ಅವರು ಪೊಲೀಸರ ಅಥವಾ ಸೊಸೈಟಿ ಸಹಾಯ ಪಡೆಯಬಹುದು~ ಎಂದರು.

`ರಂಜಾನ್ ನಂತರ ಅಸ್ಸಾಂ ಜನರ ಮೇಲೆ ದಾಳಿಗಳು ನಡೆಯಲಿವೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ವದಂತಿ ಹರಡುತ್ತಿದೆ. ಅಲ್ಲದೇ, ಟಿವಿ ಚಾನೆಲ್‌ಗಳು ಕೂಡ ಬಿಟ್ಟು ಬಿಡದೆ ಪ್ರಸಾರ ಮಾಡಿ ಈ ವದಂತಿಗಳು ದಟ್ಟವಾಗಿ ಹಬ್ಬಲು ಕಾರಣವಾಗಿವೆ~ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT