ಆದರೆ ಕಡಿದ ಮರಗಳಲ್ಲಿ ಕೇವಲ ಶೇ60 ರಷ್ಟು ಮರಗಳನ್ನು ಮಾತ್ರ ಇಲಾಖೆ ಬೇರೆ ಕಡೆಗೆ ಸಾಗಿಸಿ ಉಳಿದ ಶೇ 40ರಷ್ಟು ಮರಗಳನ್ನು ಸ್ಥಳದಲ್ಲೇ ಬಿಡಲಾಗಿದೆ. ಇದರ ಪರಿಣಾಮ ಕೋಟ್ಯಂತರ ಮೌಲ್ಯದ ಆಕೇಶಿಯಾ ಮರ ಮಣ್ಣು ಪಾಲಾಗುತ್ತಿದೆ ಎಂದು ಅವರು ದೂರಿದ್ದಾರೆ.
ಮಣ್ಣು ಪಾಲಾಗುವ ಮರಗಳನ್ನು ಇಲಾಖೆ ಉರುವಲಾಗಿ ಬಳಸಬಹುದು. ಆದರೆ ಅಧಿಕಾರಿಗಳಲ್ಲಿನ ದೂರದರ್ಶಿತ್ವದ ಕೊರತೆಯಿಂದಾಗಿ ಕಾಡಿನ ಅಮೂಲ್ಯ ಸಂಪತ್ತು ನಾಶವಾಗುತ್ತಿದೆ. ಒಂದಡೆ ವಿಶ್ವ ಬ್ಯಾಂಕಿನಿಂದ ಸಾಲ ಪಡೆದು ಅರಣ್ಯ ಅಭಿವೃದ್ಧಿ ಮಾಡುವ ಇಲಾಖೆ ಯೋಜನೆ ನಿಷ್ಪ್ರಯೋಜಕವಾಗಿದೆ.
ರಾಜ್ಯ ಸರ್ಕಾರ ಎರುಡು ವರ್ಷದ ಹಿಂದೆ ಆಕೇಶಿಯಾ ಬೆಳಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಆದರೆ ಇಲಾಖೆ ನೂರಾರು ಎಕರೆ ಗೋಮಾಳ ಪ್ರದೇಶದಲ್ಲಿ ಕದ್ದು ಮುಚ್ಚಿ ಅಕೇಶಿಯಾ ಗಿಡವನ್ನು ನೆಡುವ ಕಾರ್ಯ ಮುಂದು ವರೆಸಿದ್ದಾರೆ. ಬಡ ಹರಿಜನ, ಗಿರಿಜನರು ಸಾಕುತ್ತಿರುವ ಜಾನುವಾರು ಗಳು ಆಕೇಶಿಯಾ ತೋಪಿನೊಳಗೆ ಹೋದಲ್ಲಿ ಅಧಿಕಾರಿಗಳು ಅವುಗಳನ್ನು ಹಿಡಿದು ಹೊರಗೆ ಸಾಗಿಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಅಧಿಕಾರಿಗಳ ಒತ್ತಾಸೆಯಿಂದಾಗಿ ಗೋಮಾಳ ಜಾಗ ಕಬಳಿಕೆಯಾಗುತ್ತಿದ್ದು ಪ್ರಾಣಿಗಳಿಗೆ, ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.