ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟಗಾರರ ಹರಾಜು ಮುಂದೂಡಿಕೆ

ಇಂಡಿಯನ್ ಬ್ಯಾಡ್ಮಿಂಟನ್ ಲೀಗ್
Last Updated 18 ಜುಲೈ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ (ಐಬಿಎಲ್) ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆಯನ್ನು ಮತ್ತೆ ಮುಂದೂಡಲಾಗಿದ್ದು, ಜುಲೈ 22 ರಂದು ನಡೆಸಲು ನಿರ್ಧರಿಸಲಾಗಿದೆ.

ಈ ಮೊದಲು ತೀರ್ಮಾನಿಸಿದಂತೆ ಹರಾಜು ಜೂನ್ 30 ರಂದು ನಡೆಯಬೇಕಿತ್ತು. ಆ ಬಳಿಕ ಹರಾಜನ್ನು ಜುಲೈ 19 ರಂದು ನಡೆಸಲು ನಿರ್ಧರಿಸಲಾಗಿತ್ತು. ಇದೀಗ ಮತ್ತೆ ಮೂರು ದಿನಗಳ ಮಟ್ಟಿಗೆ ಮುಂದೂಲಾಗಿದೆ.

ಕೆಲವು ಫ್ರಾಂಚೈಸ್‌ಗಳ ಕೋರಿಕೆಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಐಬಿಎಲ್ ಸಂಘಟಕರು ಹೇಳಿದ್ದಾರೆ. `ಐಬಿಎಲ್ ಆಟಗಾರರ ಹರಾಜಿಗೆ ಮುನ್ನ ಎರಡು ದಿನಗಳ ಕಾರ್ಯಾಗಾರ ನಡೆಸಬೇಕೆಂದು ಫ್ರಾಂಚೈಸ್‌ಗಳು ಕೋರಿದ್ದವು. ಐಬಿಎಲ್ ಆಡಳಿತ ಮಂಡಳಿ ಈ ಕೋರಿಕೆಗೆ ಸಮ್ಮತಿ ಸೂಚಿಸಿದೆ.  

ಷೇರು ಖರೀದಿಸಿದ ಗಾವಸ್ಕರ್: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನಿಲ್ ಗಾವಸ್ಕರ್ ಮತ್ತು ತೆಲುಗು ನಟ ನಾಗಾರ್ಜುನ ಅವರು ಐಬಿಎಲ್‌ನ ಮುಂಬೈ ಫ್ರಾಂಚೈಸ್‌ನ ಷೇರು ಖರೀದಿಸಿದ್ದಾರೆ. ಮುಂಬೈನ ತಂಡಕ್ಕೆ `ಮುಂಬೈ ಮಾಸ್ಟರ್ಸ್' ಎಂದು ಹೆಸರಿಡಲಾಗಿದೆ.

`ಬ್ಯಾಡ್ಮಿಂಟನ್ ಜೊತೆ ಭಾಗಿಯಾಗಲು ಸಾಧ್ಯವಾಗಿರುವುದು ಹೆಮ್ಮೆಯ ಸಂಗತಿ' ಎಂದು ಗಾವಸ್ಕರ್ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT