ಸುವರ್ಣಸೌಧ (ಬೆಳಗಾವಿ): ಆಸ್ತಿ ಘೋಷಣೆ ಮಾಡದ ಪಂಚಾಯ್ತಿ ಸದ ಸ್ಯರ ಸದಸ್ಯತ್ವವನ್ನು ಅನರ್ಹಗೊಳಿಸ ದಂತೆ ತಿದ್ದುಪಡಿ ಮಾಡಲಾದ ಕರ್ನಾ ಟಕ ಪಂಚಾಯತ್ ರಾಜ್ ಮಸೂದೆಗೆ ವಿಧಾನಸಭೆ ಬುಧವಾರ ಒಪ್ಪಿಗೆ ನೀಡಿದೆ. ಇದರಿಂದ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯ್ತಿ ಸದಸ್ಯರು ಅಧಿಕಾರ ಸ್ವೀಕರಿಸಿದ ಮೂರು ತಿಂಗಳೊಳಗೆ ತಮ್ಮ ಮತ್ತು ಕುಟುಂಬದ ಆಸ್ತಿ ಘೋಷಣೆ ಮಾಡದಿದ್ದರೂ ಸದಸ್ಯತ್ವ ರದ್ದಾಗು ವುದಿಲ್ಲ. ಆದರೆ ಅವರು ಆಸ್ತಿ ಘೋಷಣೆ ಮಾಡುವುದು ಕಡ್ಡಾಯ.
ಮುಂದೆ ಅವರು ಪ್ರತಿ ವರ್ಷವೂ ಆಸ್ತಿ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಚುನಾವಣಾ ಆಯೋಗ ಅವರಿಗೆ ನೋಟಿಸ್ ನೀಡಿ ಒಂದು ತಿಂಗಳು ಅವ ಕಾಶ ಕೊಡಬೇಕು. ಆಗಲೂ ಘೋಷಣೆ ಮಾಡದಿದ್ದರೆ ಅದನ್ನು ದುರ್ನಡತೆ ಎಂದು ಪರಿಗಣಿಸಿ ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡಬಹುದು.
ಯಾವುದೇ ಸದಸ್ಯ ಆಸ್ತಿ ಘೋಷಣೆ ಮಾಡಿದ ನಂತರ ಮತ್ತಷ್ಟು ಆಸ್ತಿಯನ್ನು ಗಳಿಸಿದ್ದರೆ ಅಥವಾ ಮಾರಾಟ ಮಾಡಿ ದ್ದರೆ ಅದನ್ನೂ ಒಂದು ತಿಂಗಳೊಳಗೆ ಘೋಷಿಸಬೇಕು. ಈ ಮಸೂದೆ ಯಿಂದಾಗಿ ಆಸ್ತಿ ಘೊಷಣೆ ಮಾಡಿಲ್ಲ ಎಂದು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆ ಎದುರಿಸುತ್ತಿರುವ ಸದಸ್ಯರು ಸದಸ್ಯತ್ವ ದಿಂದ ಅನರ್ಹಗೊಳ್ಳುವ ಭೀತಿಯಿಂದ ಪಾರಾಗಲಿದ್ದಾರೆ.
ಇನ್ನೂ 3 ಮಸೂದೆಗಳ ಅಂಗೀಕಾರ: ಇದಲ್ಲದೆ ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ (ಕ್ರಷರ್) ನಿಯಂತ್ರಣ ಮಸೂದೆ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ ತಿದ್ದುಪಡಿ ಮಸೂದೆ, ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಮತ್ತು ಕೆಲವು ಇತರ ಕಾನೂನುಗಳ ತಿದ್ದುಪಡಿ ಮಸೂದೆಗಳೂ ಅಂಗೀಕಾರವಾದವು.