ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಭಾನುವಾರ ನಡೆದ ಹತ್ತನೇ ವಿಶ್ವ ಕಪ್ ಕ್ರಿಕೆಟ್ ‘ಬಿ’ ಗುಂಪಿನ ಪಂದ್ಯದಲ್ಲಿ ಭಾರತ ತಂಡವು 49.5 ಓವರ್ಗೆ ತನ್ನೇಲ್ಲಾ ವಿಕೆಟ್ಗಳನ್ನು ಕಳೆದು ಕೊಂಡು 338 ರನ್ಗಳನ್ನು ಕಲೆ ಹಾಕಿತು.
ಶತಕಗಳ ಸರದಾರ ಸಚಿನ್ ತೆಂಡೊಲ್ಕರ್ ಅವರಿಗೆ ಈ ಹತ್ತನೇ ವಿಶ್ವಕಪ್ ಪಂದ್ಯವು ಮತ್ತೊಂದು ಮೈಲಿಗಲ್ಲಿಗೆ ಕಾರಣವಾಯಿತು. ವಿಶ್ವಕಪ್ ಕ್ರಿಕೆಟ್ ಪಂದ್ಯಗಳಲ್ಲಿ ಸಚಿನ್ ತೆಂಡೊಲ್ಕರ್ ಅವರು 5ನೇ ಶತಕದ ಸಂಭ್ರಮಕ್ಕೆ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣವು ಸಾಕ್ಷಿಯಾಯಿತು.