ನೆಲಮಂಗಲ: ಪಟ್ಟಣದ ಸಮೀಪದ ಸೊಂಡೆಕೊಪ್ಪ ರಸ್ತೆಯ ಬಯಲು ಉದ್ಭವ ಶ್ರೀ ವಿನಾಯಕಸ್ವಾಮಿಯ ಬ್ರಹ್ಮ ರಥೋತ್ಸವ (ಕಡಲೆಕಾಯಿ ಪರಿಷೆ) ಮಂಗಳವಾರ ನಡೆಯಲಿದೆ.
ಈ ರಥೋತ್ಸವವು ಕಡಲೆಕಾಯಿ ಪರಿಷೆ ಎಂದೇ ಪ್ರಖ್ಯಾತವಾಗಿದ್ದು, ಸುತ್ತಮುತ್ತಲ ಹಳ್ಳಿಗಳ ಸಾವಿರಾರು ಜನ ಬರುತ್ತಾರೆ.
ಪರಿಷೆ ಪ್ರಯುಕ್ತ ಸುಮಾರು 2ಕಿ.ಮೀ.ನಷ್ಟು ದೂರದವರೆಗೂ ರಸ್ತೆಯ ಅಕ್ಕಪಕ್ಕದಲ್ಲಿ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ತೆರೆದಿರುತ್ತಾರೆ.
ಈಗಾಗಲೇ ಒಂದು ವಾರದಿಂದ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ.
ಮಂಗಳವಾರ ಮಧ್ಯಾಹ್ನ 12:30ಕ್ಕೆ ರಥೋತ್ಸವ ನಡೆಯಲಿದ್ದು, ಪ್ರಸಾದ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.