ಇದರಲ್ಲಿ ನಗರಸಭಾ ಸದಸ್ಯರೂ ಆದ ಶಿವಮೊಗ್ಗ ನಗರ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅವರು ಸೇರಿದಂತೆ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯಾನಾಯ್ಕ, ಇಬ್ಬರು ಸಂಸದರು, ನಾಲ್ವರು ವಿಧಾನಪರಿಷತ್ ಸದಸ್ಯರು ಇದ್ದಾರೆ.
ರಾಜ್ಯದ ಆಡಳಿತ ಪಕ್ಷ ಕಾಂಗ್ರೆಸ್, ಜೆಡಿಎಸ್ ಜತೆ ಸೇರಿ ನಗರಸಭೆಯನ್ನು ಕೈ ವಶಪಡಿಸಿಕೊಳ್ಳಲು ಹೊಂಚು ಹಾಕಿದ್ದು, ಈ ಸಂಬಂಧ ಕೆಜೆಪಿ, ಎಸ್ಡಿಪಿಐ ಹಾಗೂ ಪಕ್ಷೇತರರನ್ನು ತಮ್ಮಡೆಗೆ ಸೆಳೆಯುವ ಪ್ರಯತ್ನದಲ್ಲಿ ಇದೆ. ಆದರೆ, ಬಿಜೆಪಿ–ಕೆಜೆಪಿ ಒಟ್ಟಾಗಿ ಈ ಚುನಾವಣೆ ಎದುರಿಸಲು ಸಜ್ಜಾಗಿವೆ. ಈಚೆಗೆ ಯಡಿಯೂರಪ್ಪ–ಈಶ್ವರಪ್ಪ ಈ ಸಂಬಂಧವೇ ಒಂದಾಗಿ ಚರ್ಚೆ ನಡೆಸಿದ್ದು, ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧರಾಗಿದ್ದಾರೆ. ಈ ಎರಡೂ ಪಕ್ಷಗಳು ಒಂದಾದರೂ ಇನ್ನೊಂದು ಸದಸ್ಯರ ಬೆಂಬಲ ಬಿಜೆಪಿ–ಕೆಜೆಪಿಗೆ ಬೇಕಾಗಿದ್ದು, ಅದಕ್ಕಾಗಿ ಪಕ್ಷೇತರರ ಮೊರೆ ಹೋಗಿದ್ದಾರೆ.