‘ವಿಶ್ವವಿನಾಯಕ’
ವಿ. ಸ್ವಾಮಿನಾಥನ್ ನಿರ್ಮಿಸಿ, ನಿರ್ದೇಶಿಸಿರುವ ‘ವಿಶ್ವವಿನಾಯಕ’ ಭಕ್ತಿ ಪ್ರಧಾನ ಚಿತ್ರ ಈ ವಾರ ಬಿಡುಗಡೆಯಾಗಲಿದೆ. ಸುದರ್ಶನ್, ಶೈಲಶ್ರೀ, ಬ್ರಹ್ಮಾವರ್, ಮಾ. ದರ್ಶನ್, ಮಾ. ಕಿರಣ್, ನವೀನ್, ಡಾ. ವಸಂತ್, ಸುಮಾ, ಅಶ್ವಿನಿ, ರೋಹಿಣಿ ನಾಗರಾಜ್, ಕಾವ್ಯಾ, ಮನು ಅನಿರುದ್ಧ್ ತಾರಾಗಣದಲ್ಲಿದ್ದಾರೆ.
‘ಕರ್ನಾಟಕ ಅಯೋಧ್ಯಪುರ’
ಕೆ.ಆರ್. ಮಧುಸೂದನ್, ಕೆ.ಟಿ. ವೆಂಕಟರಾಮು ನಿರ್ಮಿಸಿರುವ ‘ಕರ್ನಾಟಕ ಅಯೋಧ್ಯಪುರ’ ಈ ವಾರ ತೆರೆ ಕಾಣುತ್ತಿದೆ. ಚಿತ್ರದ ನಿರ್ದೇಶಕ ಲವ. ರಾಕೇಶ್, ನಯನಾ, ಅಚ್ಯುತ್ ಕುಮಾರ್, ಸ್ವಸ್ತಿಕ್ ಶಂಕರ್, ಬುಲೆಟ್ ಪ್ರಕಾಶ್, ಮೋಹನ್ ಜುನೇಜ, ಅಕ್ಷಯ್, ಹರೀಶ್ ಇತರರು ತಾರಾಗಣದ ಲ್ಲಿದ್ದಾರೆ. ಸಾಗರ್ ನಾಗಭೂಷಣ್ ಸಂಗೀತ ಚಿತ್ರಕ್ಕಿದೆ.
‘ಘರ್ಷಣೆ’
ಮಾಲಾಶ್ರೀ ಮುಖ್ಯ ಭೂಮಿಕೆಯ ಶಂಕರ್ಗೌಡ ಹಾಗೂ ಶಂಕರ್ರೆಡ್ಡಿ ನಿರ್ಮಿಸಿರುವ ‘ಘರ್ಷಣೆ’ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ದಯಾಳ್ ಪದ್ಮನಾಭನ್ ಈ ಚಿತ್ರದ ನಿರ್ದೇಶಕ. ಸುಚೇಂದ್ರ ಪ್ರಸಾದ್, ಪವಿತ್ರಾ ಲೋಕೇಶ್, ಆಶೀಶ್ ವಿದ್ಯಾರ್ಥಿ, ರೂಪಿಕಾ, ರವಿಶಂಕರ್, ಮುನಿ, ಗುರುರಾಜ ಹೊಸಕೋಟೆ, ಕಾಶಿ, ಮೈಕೋ ನಾಗರಾಜ್ ಇತರರು ತಾರಾಬಳಗದಲ್ಲಿ ಇದ್ದಾರೆ.