ಈ ಕುಟುಂಬಗಳಿಗೆ ನೆರವು ನೀಡುವ ಉದ್ದೇಶದಿಂದ ಗಂಜ್ ವರ್ತಕರು ಹಾಗೂ ಕೈಗಾರಿಕೆಗಳ ಮಾಲೀಕರ ಸಂಘದ ಸಹಾಯಧನವನ್ನು ಸಂಗ್ರಹಿಸಲಾಗಿದೆ. ಆದಾಯ ತೆರಿಗೆ ವಿನಾಯ್ತಿ ಪಡೆಯಲು ಚೆಕ್ನ ಸ್ವೀಕೃತ ರಸೀದಿ ನೀಡಬೇಕು ಎಂದು ಸಂಘದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ ಮನವಿ ಮಾಡಿದರು.
ಚೆಕ್ ನೀಡುವ ಸಂದರ್ಭದಲ್ಲಿ ಗಂಜ್ ವರ್ತಕರ ಸಂಘದ ಕೋಶಾಧ್ಯಕ್ಷ ರಮೇಶಲಾಲ್ ದೋಖಾ, ಜಂಟಿ ಕಾರ್ಯದರ್ಶಿ ಗಧಾರ ಬೆಟ್ಟಪ್ಪ, ಸದಸ್ಯರಾದ ಗಿರಿರಾಜ ಮೂಥಾ, ಜಯಂತಿಲಾಲ ಮಿಶ್ರಾ, ಎಂ.ನಾಗರೆಡ್ಡಿ, ಕೈಗಾರಿಕೆ ಮಾಲೀಕರ ಸಂಘದ ಅಧ್ಯಕ್ಷ ವಿ.ನಾಗರೆಡ್ಡಿ, ಕಾರ್ಯದರ್ಶಿ ಲಕ್ಷ್ಮೀರೆಡ್ಡಿ, ಸದಸ್ಯರಾದ ಶಾಂತಿಲಾಲ ಮೂಥಾ, ಆರ್.ಕುರ್ಮಾರೆಡ್ಡಿ ಹಾಗೂ ಮತ್ತಿತರರಿದ್ದರು.