ನಗರದಲ್ಲಿ 108 ಕಡೆ ಉದ್ಯಾನಕ್ಕಾಗಿ ಸ್ಥಳ ಗುರುತಿಸಲಾಗಿದೆ. 92 ಕಡೆಗಳಲ್ಲಿ ಆವರಣ ನಿರ್ಮಿಸಲಾಗಿದೆ. ಮುಂದೆ ಬರುವ ಮುಖ್ಯಮಂತ್ರಿ ಅನುದಾನದಲ್ಲಿ ಎಲ್ಲ ಉದ್ಯಾನಗಳಲ್ಲಿ ಗಿಡ ನೆಡಲು ಕ್ರಮ ಕೈಗೊಳ್ಳಲಾಗುವುದು. ದಾವಣಗೆರೆಯನ್ನು ಉದ್ಯಾನ ನಗರವನ್ನಾಗಿಸಬೇಕು ಎಂಬ ಕನಸು ಇದೆ. ತಮ್ಮ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವ ರೀತಿಯಲ್ಲೇ ಉದ್ಯಾನಗಳನ್ನೂ ಇಟ್ಟುಕೊಳ್ಳಬೇಕು. ನಾಗರಿಕರು ಮುಂದೆ ಬಂದಲ್ಲಿ ಉಳಿದ ಸೌಲಭ್ಯ ಕಲ್ಪಿಸಲು ಪಾಲಿಕೆ ವತಿಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಆರೋಗ್ಯ ಕಾಪಾಡಲು, ವಿಹಾರಕ್ಕೆ, ಮಕ್ಕಳ ಆಟಕ್ಕೆ ಪ್ರತಿಯೊಂದಕ್ಕೂ ಉದ್ಯಾನ ಬೇಕಾಗುತ್ತದೆ. ಅದು ಪರಿಸರದ ಒಂದು ಭಾಗವಾಗಿಯೇ ಇರುತ್ತದೆ. ನಗರದ ಎಲ್ಲ ಉದ್ಯಾನಗಳಿಗೆ ಹಂತ-ಹಂತವಾಗಿ ಮೆರುಗು ನೀಡಲಾಗುತ್ತದೆ. ಅದರಲ್ಲಿ ಮನೋರಂಜನಾ ವೇದಿಕೆ ಹೊಸ ಪರಿಕಲ್ಪನೆ ಎಂದು ಬಣ್ಣಿಸಿದರು.ನಾಗರಿಕ ಹಿತರಕ್ಷಣಾಸಮಿತಿ ಅಧ್ಯಕ್ಷ ಡಾ.ಜಿ.ಸಿ. ಬಸವರಾಜ್ ವೇದಿಕೆ ಉದ್ಘಾಟಿಸಿದರು. ಪಾಲಿಕೆ ಸದಸ್ಯೆ ಜ್ಯೋತಿ ಸಿದ್ದೇಶ್, ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ್ ಮಾತನಾಡಿದರು.