ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪನ್ಯಾಸಕರ ವರ್ಗಾವಣೆ ರದ್ದಿತಿಗೆ ಆಗ್ರಹ

Last Updated 13 ಸೆಪ್ಟೆಂಬರ್ 2011, 9:15 IST
ಅಕ್ಷರ ಗಾತ್ರ

ಹಿರೇಕೆರೂರ: ಹಿರೇಕೆರೂರ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕ ರೊಬ್ಬರ  ವರ್ಗಾವಣೆಯನ್ನು ರದ್ದುಪಡಿ ಸಲು ಒತ್ತಾಯಿಸಿ ವಿದ್ಯಾರ್ಥಿಗಳು ಸೋಮವಾರ ಕಾಲೇಜಿನ ಎದುರು ಪ್ರತಿಭಟನೆ ನಡೆಸಿದರು.

ಭೂಗೋಳಶಾಸ್ತ್ರ ಉಪನ್ಯಾಸಕ ಎಂ. ವೈ.ಜಟ್ಟೆಣ್ಣನವರ ಅವರನ್ನು ವರ್ಗಾವಣೆ ಮಾಡಲಾಗಿದೆ. ಉತ್ತಮ ವಾಗಿ ಉಪನ್ಯಾಸ ಮಾಡುವ ಅವರಿಂದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲ ವಾಗಿದೆ. ಕಾರಣ ಅವರ ವರ್ಗಾವಣೆ ರದ್ದುಪಡಿಸಿ ಇಲ್ಲಿಯೇ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ತರಗತಿ ಬಹಿಷ್ಕರಿಸಿ ಪ್ರತಿಭಟನೆಯಲ್ಲಿ   ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ಉಪತಹ ಸೀಲ್ದಾರ ತುಷಾರ ಹೊಸೂರ ಮನವಿ ಸ್ವೀಕರಿಸಿ, ಎಂ.ವೈ.ಜಟ್ಟೆಣ್ಣನವರ ಅವರನ್ನು ಸದ್ಯ ಬಿಡುಗಡೆಗೊಳಿಸದಂತೆ ಪ್ರಾಚಾರ್ಯರಿಗೆ ತಿಳಿಸಲಾಗುವುದು ಎಂದು ಭರವಸೆ ನೀಡದ ನಂತರ ಪ್ರತಿಭಟನೆ ಕೈಬಿಡಲಾಯಿತು.

ಎಬಿವಿಪಿ ಮುಖಂಡ ದೇವರಾಜ ಹಂಚಿನಮನಿ, ವಿದ್ಯಾರ್ಥಿಗಳಾದ ಅನಿಲ ಹಲ ವಾಗಿಲ, ಪ್ರವೀಣ ಕುರುವತ್ತೇರ, ಅಜಯ ಕಲ್ಯಾಣಿ, ಕಿರಣ ಭಜಂತ್ರಿ, ಪ್ರಕಾಶ ಅರಳೀಕಟ್ಟಿ, ಸ್ಮಿತಾ ಪಾಟೀಲ, ಗೀತಾ ಮಾಯಾಚಾರಿ, ಶ್ರೀದೇವಿ ಗೊರವರ, ರೂಪಾ ಜೋಗಿಹಳ್ಳಿ, ಅಶ್ವಿನಿ ಹಿರೇಮಠ, ರಂಜಿತಾ ಕಲಾಲ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT