ನವದೆಹಲಿ (ಪಿಟಿಐ): ಮೋದಿ ಉಪವಾಸಕ್ಕೆಬೆಂಬಲಿಸಿರುವ ಎಐಎಡಿಎಂಕೆ ನಿರ್ಧಾರ ಸರಿಯಲ್ಲ ಎಂದು ಸಿಪಿಐ ಭಾನುವಾರ ಟೀಕಿಸಿದೆ.
ಅಹಮದಾಬಾದ್ನಲ್ಲಿ ಶನಿವಾರ ಆರಂಭವಾದ ಮೋದಿ ಅವರ ಮೂರು ದಿನಗಳ ಸದ್ಭಾವನಾ ಉಪವಾಸದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಎಐಎಡಿಎಂಕೆಯ ಪ್ರತಿನಿಧಿಯಾಗಿ ವಿ.ಮೈತ್ರೇಯನ್ ಮತ್ತು ತಂಬಿದೊರೈ ಅವರನ್ನು ಜಯಲಲಿತಾ ಕಳುಹಿಸಿದ್ದರು.
ಎಐಎಡಿಎಂಕೆ ನೀತಿಯನ್ನು ಯೆಚೂರಿ ಕಟುವಾಗಿ ಖಂಡಿಸಿದ್ದಾರೆ. ಮೋದಿ ಅವರ ಈ ಉಪವಾಸ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದಾಗಿದೆ ಎಂದೂ ಅವರು ಆರೋಪಿಸಿದರು.