ಲಖನೌ (ಐಎಎನ್ಎಸ್): ಕಾಂಗ್ರೆಸ್ನ ಹಿರಿಯ ಮುಖಂಡ ಎನ್.ಡಿ.ತಿವಾರಿ (88) ಅವರು ನೈನಿತಾಲ್ ಲೊಕಸಭೆ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಅವರ ಆಪ್ತ ವಲಯ ತಿಳಿಸಿದೆ.
ತಮಗೆ ಕೊನೆಯ ಅವಕಾಶ ನೀಡುವಂತೆ ಕೇಳಿದ್ದ ತಿವಾರಿ, ಇತ್ತೀಚೆಗೆ ತಾವು ಮಗ ಎಂದು ಒಪ್ಪಿಕೊಂಡಿರುವ ರೋಹಿತ್ ಶೇಖರ್ ಅವರಿಗೂ ಯಾವುದಾದರೂ ಕ್ಷೇತ್ರದಿಂದ ಟಿಕೆಟ್ ನೀಡಲು ಪಕ್ಷದ ಮುಖಂಡರಲ್ಲಿ ಕೇಳಿದ್ದರು. ಆದರೆ ಇದಕ್ಕೆ ಪಕ್ಷ ಮನ್ನಣೆ ನೀಡಲಿಲ್ಲ ಎಂದು ತಿಳಿದುಬಂದಿದೆ.
‘ಜೀವನ ಪರ್ಯಂತ ಸೇವೆ ಸಲ್ಲಿಸಿದ ಪಕ್ಷದಿಂದ ನನಗೆ ಅನ್ಯಾಯ ಆಗಿದೆಯೇ ಇಲ್ಲವೇ ಎಂಬುದನ್ನು ಉತ್ತರಾಖಂಡದ ಜನರೇ ನಿರ್ಧರಿಸುತ್ತಾರೆ. ಯಾರು ತಮ್ಮ ಪ್ರತಿನಿಧಿ ಆಗಬೇಕು ಎಂಬುದು ಅವರಿಗೆ ತಿಳಿದಿದೆ’ ಎಂದು ತಿವಾರಿ ಅವರು ಮಂಗಳವಾರ ಹೇಳಿದ್ದಾರೆ.