ಈ ಕಾರಣದಿಂದ ಮೇ ತಿಂಗಳ ಕೊನೆಯಲ್ಲಿ ಎನ್ಸಿಎ ಕಾರ್ಯ ಚಟುವಟಿಕೆಗಳನ್ನು ನಿಲ್ಲಿಸಿ, ಆಟಗಾರರ ತರಬೇತಿ ಕೇಂದ್ರವನ್ನಾಗಿ ಪರಿವರ್ತಿಸಲು ಬಿಸಿಸಿಐ ನಿರ್ಧರಿಸಿದೆ. ಏಪ್ರಿಲ್ 12ರಂದು ಚೆನ್ನೈನಲ್ಲಿ ನಡೆದ ಎನ್ಸಿಎ ಸಮಿತಿ ಸಭೆಯಲ್ಲಿ ಈ ಕುರಿತು ಪ್ರಸ್ತಾವನೆ ಮುಂದಿಡಲಾಗಿದೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿತ್ತು.
ಆದರೆ, ಈ ಸುದ್ದಿಯನ್ನು ಬಿಸಿಸಿಐನ ಮುಖ್ಯ ಆಡಳಿತಾಧಿಕಾರಿ ರತ್ನಾಕರ ಶೆಟ್ಟಿ ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ. `ಎನ್ಸಿಯನ್ನು ಮುಚ್ಚುವ ಕುರಿತಾದ ವರದಿ ಶುದ್ಧ ಸುಳ್ಳು. ಬೆಂಗಳೂರಿನಲ್ಲಿರುವ ಎನ್ಸಿಎ, ಚೆನ್ನೈ, ಮುಂಬೈ ಮತ್ತು ಮೊಹಾಲಿಯಲ್ಲಿರುವ ಪ್ರಾದೇಶಿಕ ಕಚೇರಿಗಳ ಕಾರ್ಯಗಳನ್ನು ಬಿಸಿಸಿಐ ಪ್ರತಿವರ್ಷವೂ ನಿಗದಿಪಡಿಸುತ್ತದೆ. ಆದರೆ, ಮುಚ್ಚುವ ಬಗ್ಗೆ ಚರ್ಚೆ ನಡೆದಿಲ್ಲ' ಎಂದರು.