ಆದರೆ, ಎಂಇಎಸ್ ಸದಸ್ಯರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಅಗೌರವ ತೋರಿದ್ದರು. ಎಂಇಎಸ್ನವರ ಪುಂಡಾಟಿಕೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಪಾಲಿಕೆಯನ್ನೇ ಡಿಸೆಂಬರ್ 15ರಂದು `ಸೂಪರ್ಸೀಡ್~ ಮಾಡಿದ್ದು ಈಗ ಇತಿಹಾಸ.
`ಕಂಬಾರರಿಗೆ `ಪೌರ ಸನ್ಮಾನ~ ಮಾಡಲು ಪಾಲಿಕೆಯ ಮರಾಠಿ ಭಾಷಿಕ ಸದಸ್ಯರು ಅಡ್ಡಿಯಾದರೂ ಬೆಳಗಾವಿಯಲ್ಲಿಯೇ ಪ್ರಶಸ್ತಿಯನ್ನು ರಾಷ್ಟ್ರಪತಿಗಳು ಪ್ರದಾನ ಮಾಡಬೇಕು ಎಂಬುದು `ದೈವ ಸಂಕಲ್ಪ~ವಾಗಿರಬೇಕು. ಈ ಸಮಾರಂಭದಲ್ಲಿ ಸಾಹಿತಿಗಳಿಗೆ ಹೆಚ್ಚು ಅವಕಾಶ ಕಲ್ಪಿಸುವ ಮೂಲಕ ಇದನ್ನು ಅತ್ಯುನ್ನತ ಸಾಹಿತ್ಯಿಕ ಕಾರ್ಯಕ್ರಮವನ್ನಾಗಿ ರೂಪಿಸಬೇಕು~ ಎನ್ನುತ್ತಾರೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಡಾ. ಬಸವರಾಜ ಜಗಜಂಪಿ.