ಟಿ. ಜಾನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಅಧ್ಯಕ್ಷ ಡಾ. ಥಾಮಸ್ ಪಿ. ಜಾನ್ ಮಾತನಾಡಿ, `ಈ ಚಟುವಟಿಕೆಯು ಕಾಲೇಜಿನ ವಿದ್ಯಾರ್ಥಿಗಳಿಗೆ ಸಾಮಾಜಿಕ ಕರ್ತವ್ಯವನ್ನು ಅರಿಯಲು ಸಹಾಯ ಮಾಡಿದೆ. ಸಮರ್ಥನೀಯತೆ ಕುರಿತ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಲು ಶಿಕ್ಷಣ ಸಂಸ್ಥೆ ಬದ್ಧವಾಗಿದೆ. ಸುತ್ತಲಿನ ಸಮುದಾಯದವರ ಆರೋಗ್ಯ ಅಭಿವೃದ್ಧಿ, ಬಡವರು ಹಾಗೂ ಅವಕಾಶ ವಂಚಿತರಿಗೆ ನೆರವು ನೀಡುವುದು ಕಾರ್ಯಕ್ರಮದ ಉದ್ದೇಶ~ ಎಂದರು. ಫಿಲಿಪ್ಸ್ ಇಂಡಿಯಾ ಲಿ. ನಿರ್ದೇಶಕ ಆರ್. ಡಿ. ವಿಕ್ರಂ, ಸಿಐಎಸ್ ಸಂಯೋಜಕರು, ಯೂತ್ ಫಾರ್ ಸೇವಾ ಸಂಸ್ಥೆಯ ಸ್ವಯಂಸೇವಕರು, ಶ್ರಿರಾಂ ರಾಮಕೃಷ್ಣ, ನಾರಾಯಣ ನೇತ್ರಾಲಯದ ಕಣ್ಣಿನ ತಜ್ಞರು ಹಾಗೂ ಲೋಕಸೇವಾ ಆಪ್ಟಿಷಿಯನ್ಸ್ನ ಪ್ರತಿನಿಧಿಗಳ ಸಮ್ಮುಖದಲ್ಲಿ ಕನ್ನಡಕಗಳನ್ನು ವಿತರಿಸಲಾಯಿತು.