ಕನ್ನಡದ ಅಗ್ರಮಾನ್ಯ ಸಾಹಿತಿ, ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ಹೊತ್ತ, ಶಿವಮೊಗ್ಗದ `ಕುವೆಂಪು ವಿಶ್ವವಿದ್ಯಾಲಯ~ವು ನಕಲಿ ಅಂಕಪಟ್ಟಿಗಳ ಹಗರಣದಿಂದಾಗಿ ಬಹಳ ಪ್ರಚಾರದಲ್ಲಿದೆ.
ಆಡಳಿತ ವೈಫಲ್ಯದಿಂದ ಸಂಭವಿಸಿರಬಹುದಾದ ಇಂತಹ ದುಷ್ಕೃತ್ಯದ, ಮುಂದಿನ ದಿನಗಳಲ್ಲಿ ಇವುಗಳನ್ನು ನಿವಾರಿಸುವ ಕುರಿತು ಇತ್ತೀಚೆಗೆ `ಕುವೆಂಪು ವಿ.ವಿ.~ಯು ದಿನಪತ್ರಿಕೆಗಳಲ್ಲಿ ಜಾಹೀರಾತನ್ನು ನೀಡಿದೆ.
ಈ ಜಾಹೀರಾತಿನಲ್ಲಿನ ವಾಕ್ಯರಚನೆ, ಕಾಗುಣಿತಗಳನ್ನು ಗಮನಿಸಿದವರಿಗೆ ಒಂದು ವಿಶ್ವವಿದ್ಯಾಲಯ, ಅದರಲ್ಲೂ ಕನ್ನಡ ಕಂಪನ್ನು ಪಸರಿಸಿದ `ಕುವೆಂಪು~ ಸ್ಮರಣೆಯಲ್ಲಿ ಸ್ಥಾಪಿತ ವಿಶ್ವವಿದ್ಯಾಲಯ ಎಷ್ಟು ಜವಾಬ್ದಾರಿ - ಕರ್ತವ್ಯನಿಷ್ಠೆ ಮೆರೆದಿದೆ ಎಂದು ಸೋಜಿಗವಾಗುತ್ತದೆ.