ನಗರದ ಎನ್.ಎ. ಮುತ್ತಯ್ಯ ಸ್ಮಾರಕ ಪೊಲೀಸ್ ವಸತಿ ಶಾಲೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ವಿರಾಮದ ವೇಳೆಗೆ 13-6ರಿಂದ ಸುಸ್ಥಿತಿಯಲ್ಲಿದ್ದ ಕರ್ನಾಟಕ ತಂಡ, ದ್ವಿತೀಯಾರ್ಧದ ಆಟದಲ್ಲಿ ಪಂದ್ಯದ ಮೇಲಿನ ಹಿಡಿತವನ್ನು ಕಳೆದುಕೊಂಡು ಆತಂಕದ ಸ್ಥಿತಿ ತಲುಪಿತ್ತು. ರೆಫ್ರಿ ಅಂತಿಮ ಸೀಟಿ ಊದಿದಾಗ ಎರಡು ಪಾಯಿಂಟ್ ಅಂತರದಿಂದ ಮುಂದಿದ್ದ ಕರ್ನಾಟಕ ತಂಡದ ಆಟಗಾರರು ಸಂಭ್ರಮದಿಂದ ಮೈದಾನದ ತುಂಬಾ ಕುಣಿದಾಡಿದರು.