ಮಂಗಳೂರು: ಪಿಯುಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದು, ಹಲವು ವಿದ್ಯಾರ್ಥಿಗಳು ಗರಿಷ್ಠ ಅಂಕಗಳಿಸಿ ರಾಜ್ಯದ ಗಮನ ಸಳೆದಿದ್ದಾರೆ.
ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ವಿಜ್ಞಾನ ವಿಭಾಗದ ವಿವೇಕ್ ಹೆಗ್ಡೆ 590 ಅಂಕ ಗಳಿಸಿದ್ದರೆ, ವಿಟ್ಲ ಅಳಿಕೆಯ ಸತ್ಯಸಾಯಿ ಲೋಕಸೇವಾ ವಿದ್ಯಾಕೇಂದ್ರದ ವಿಜ್ಞಾನ ವಿಭಾಗದ ಎಚ್.ಚಿದಾನಂದ ಹಾಗೂ ಮಂಗಳೂರಿನ ಎಕ್ಸ್ಪರ್ಟ್ ಕಾಲೇಜಿನ ಎನ್.ಸುಮಂತ್ ಅವರು ತಲಾ 589 ಅಂಕ ಗಳಿಸಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಮೇಘನಾ ಮಧುಕೇಶ್ವರ ಹೆಗ್ಡೆ 586 ಅಂಕ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಉಡುಪಿಯ ಅಕ್ಷಯ್ ಬಲ್ಲಾಳ್ 584 ಅಂಕ ಗಳಿಸಿದ್ದರೆ, ವಿಜ್ಞಾನ ವಿಭಾಗದಲ್ಲಿ ಪ್ರತೀಕ್ಷಾ ಹೆಗಡೆ 582 ಅಂಕ ಗಳಿಸಿದ್ದಾರೆ.