ನವದೆಹಲಿ (ಪಿಟಿಐ): ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಕ್ರೀಡಾ ಆಡಳಿತಗಾರ ಸುರೇಶ್ ಕಲ್ಮಾಡಿ, ವಿ.ಕೆ.ವರ್ಮ ಹಾಗೂ ಲಲಿತ್ ಭಾನೋಟ್ ಅವರನ್ನು ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಯಾವುದೇ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಶೀಘ್ರವೇ ಅಮಾನತುಗೊಳಿಸಿ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಸೂಚಿಸಿರುವುದನ್ನು `ಕ್ಲೀನ್ ಸ್ಪೋರ್ಟ್ಸ್ ಇಂಡಿಯಾ~ (ಸಿಎಸ್ಐ) ಸ್ವಾಗತಿಸಿದೆ.
ಅಷ್ಟು ಮಾತ್ರವಲ್ಲದೇ, ಈ ಮೂವರನ್ನು ಅಮಾನತುಗೊಳಿಸಿರುವುದನ್ನು ಖಚಿತಪಡಿಸಿಕೊಳ್ಳುವಂತೆ ಕ್ಲೀನ್ ಸ್ಪೋರ್ಟ್ಸ್ ಐಒಸಿಗೆ ಪತ್ರ ಬರೆದಿದೆ. `ಅಮಾನತು ಮಾಡುವಂತೆ ಪತ್ರ ಬರೆದಿರುವುದಕ್ಕೆ ಧನ್ಯವಾದಗಳು. ಈ ಸೂಚನೆಗೆ ಭಾರತದ ಎಲ್ಲರ ಬೆಂಬಲವಿದೆ. ಆದರೆ ಅಮಾನತುಗೊಳಿಸಲಾಗಿದೆಯೇ ಇಲ್ಲವೇ ಎಂಬುದರ ಬಗ್ಗೆ ನಿಗಾ ಇಡಬೇಕು~ ಎಂದು ಐಒಸಿ ಅಧ್ಯಕ್ಷ ಜಾಕ್ ರೋಗ್ಗೆ ಬರೆಯಲಾದ ಪತ್ರದಲ್ಲಿ ಸಿಎಸ್ಐ ತಿಳಿಸಿದೆ.