`84 ತಾಲ್ಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡಿದೆ. ಆದರೆ, ಬರ ಪರಿಸ್ಥಿತಿಯನ್ನು ನಿಯಂತ್ರಿಸಲು ಜಿಲ್ಲಾಧಿಕಾರಿಗೆ ಅಗತ್ಯ ಅನುದಾನ ನೀಡಿಲ್ಲ. ಚಾಮರಾಜನಗರದಲ್ಲಿ ರೂ.58ಲಕ್ಷ,ಮಂಡ್ಯ ರೂ. 1 ಕೋಟಿ, ತುಮಕೂರು ಜಿಲ್ಲಾಧಿಕಾರಿ ಬಳಿ ರೂ. 2.5 ಕೋಟಿ, ಚಿತ್ರದುರ್ಗ ಜಿಲ್ಲಾಡಳಿತ ಬಳಿ ರೂ. 6 ಕೋಟಿ ಹಣವಿದೆ. ಆದ್ದರಿಂದ ಬರಗಾಲವನ್ನು ನಿಯಂತ್ರಿಸಲು ಕೂಡಲೇ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಬೇಕು~ ಎಂದು ಒತ್ತಾಯಿಸಿದರು.