ಗಣೇಶ ಈಗ ಚಿಕ್ಕಕೆರೆಯಲ್ಲಿ ಬೀಳುವುದು ಕಷ್ಟ. ಹಲಸೂರು ಕೆರೆಯ ಕಡೆ ಕಣ್ಣಾಡಿಸಿದರೆ ಇದು ಸ್ಪಷ್ಟ. ನೀರಿನಲ್ಲಿ ಕರಗದ ಗಣಪ ಇಲ್ಲಿ ಕಸದ ರಾಶಿಯ ಭಾಗವಾಗುತ್ತಾನೆ. ಅವನನ್ನು ತೆಗೆದುಕೊಂಡು ಹೋಗಿ ಮತ್ತೆ ಪೂಜೆ ಮಾಡುವ ಬಯಕೆ ಚಿಣ್ಣರದು.
ವಿಸರ್ಜನೆ ಮಾಡಿದವರು ತಾವು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ಗಣಪ ಕರಗಿದನೋ ಇಲ್ಲವೋ ಎಂದು ಆಗೀಗ ಹೋಗಿ ಪರಿಶೀಲಿಸಿ ಬರುವುದೂ ಉಂಟು. ಇನ್ನೇನಿದ್ದರೂ ಪರಿಸರ ಗಣಪನಿಗಷ್ಟೇ ಕಾಲ ಎಂಬುದರ ಎಚ್ಚರಿಕೆಯಂತೆ ಈ ಚಿತ್ರಗಳು ಕಾಣುತ್ತವೆ.