ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲ್‌ಸೆಂಟರ್‌ ಮೇಲೆ ದಾಳಿ ಆರೋಪಿಗಾಗಿ ಶೋಧ

Last Updated 23 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮಂಗಳೂರು: ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೂಳೂರಿನ ಓರ್ಬಿಸ್ ಬ್ಯುಸಿ ನೆಸ್ ಮ್ಯಾನೇಜ್‌ಮೆಂಟ್ ಹೆಸರಿನ ಕಾಲ್ ಸೆಂಟರ್‌ಗೆ ಶುಕ್ರವಾರ ರಾತ್ರಿ ನಾಲ್ವರು ದುಷ್ಕರ್ಮಿಗಳು ನುಗ್ಗಿ ದಾಂದಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆ ಸಿಕೊಂಡಿರುವ ಆರೋಪಿಯನ್ನು ಪತ್ತೆ ಹಚ್ಚುವಂತೆ ಪೊಲೀಸ್‌ ಉಪ ಆಯುಕ್ತ ಜಗದೀಶ್‌ ಅವರು ಕಾವೂರ್‌ ಪೊಲೀಸ್‌ ಠಾಣಾಧಿಕಾರಿಗೆ ಸೂಚಿಸಿದ್ದಾರೆ.

ಭಾನುವಾರ ಈ ಕಾಲ್‌ಸೆಂಟರ್‌ನ ಆಫೀಸರ್‌  ಕಾವೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದಾಂದಲೆ ನಡೆಸಿದವರ ಪೈಕಿ ಮೂವರನ್ನು ಬಂಧಿಸಿ ಬಿಡು ಗಡೆ ಮಾಡಲಾಗಿದೆ. ಇನ್ನೊಬ್ಬ ಆರೋಪಿ ಶಿವ ಎಂಬಾತನಿಗಾಗಿ ಇದೀಗ ತೀವ್ರ ಶೋಧ ನಡೆದಿದೆ.

‘ಕಾಲ್‌ಸೆಂಟರ್‌ನಲ್ಲಿ ವೃತ್ತಿನಿರತ ಮಹಿಳೆಯರಿಗೆ ನಿಂದಿಸಿದ್ದರೂ ಪೊಲೀಸರು ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಂಡಿಲ್ಲ ಎಂಬುದಾಗಿ ಡಿಸಿಪಿ ಜಗದೀಶ್‌ ಗಮನಕ್ಕೆ ತಂದಿದ್ದೆವು. ಆ ಹಿನ್ನೆಲೆಯಲ್ಲಿ ತಲೆ ಮರೆಸಿಕೊಂಡಿರುವ ಆರೋಪಿ ಪತ್ತೆಗೆ ಡಿಸಿಪಿ ಸೂಚಿಸಿದ್ದಾರೆ ಎಂದು ಕಾಲ್‌ಸೆಂಟರ್‌ನ ಸುಜಿತ್‌ ಕುಮಾರ್‌  ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT