ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಣಿಗಲ್‌ ಪಟ್ಟಣಕ್ಕೆ ಬಂದ ಚಿರತೆ

Last Updated 15 ಡಿಸೆಂಬರ್ 2013, 19:53 IST
ಅಕ್ಷರ ಗಾತ್ರ

ಕುಣಿಗಲ್‌: ಪಟ್ಟಣದ ದಿವ್ಯಾ ಕನ್ವೆನ್ಷನ್‌ ಹಾಲ್‌ ಸಮೀಪ ಕಟ್ಟಿದ್ದ ಕರುಗಳ ಮೇಲೆ ಭಾನುವಾರ ಬೆಳಗಿನ ಜಾವ ಚಿರತೆ ದಾಳಿ ನಡೆಸಿದ್ದು, ನಾಗರಿಕರಲ್ಲಿ ಭೀತಿ ಮೂಡಿಸಿದೆ. ವಾನಂಬಾಡಿ ಕಾಲೊನಿಯ ಗೋಂವಿದ­­ರಾಜು ಮನೆ ಮುಂದೆ ಹಸು ಹಾಗೂ ಕರುಗಳನ್ನು ಕಟ್ಟಲಾಗಿತ್ತು. ಮುಂಜಾನೆ ದಾಳಿ ನಡೆಸಿರುವ ಚಿರತೆ ಎರಡು ಕರುಗಳನ್ನು ಸಮೀಪದ ಗದ್ದೆ ಬಯಲಿಗೆ ಎಳೆದೊಯ್ದು ತಿಂದು ಪರಾರಿಯಾಗಿದೆ.

ಇದುವರೆಗೂ ಪಟ್ಟಣದ ಸುತ್ತ­ಮುತ್ತಲಿನ ವಿವಿಧ ಗ್ರಾಮಗಳಲ್ಲಿ ಚಿರತೆ ಜಾನುವಾರುಗಳ ಮೇಲೆ ದಾಳಿ ನಡೆ­ಸುತ್ತಿದ್ದು, ಇದೀಗ ಪಟ್ಟಣದ ಹೊರ ವಲಯದಲ್ಲಿ ಕಾಣಿಸಿಕೊಂಡಿರುವುದು ನಾಗರಿಕರ ಆತಂಕ ಹೆಚ್ಚಿಸಿದೆ.

ಕಳೆದ ವಾರವಷ್ಟೇ ಪಟ್ಟಣ ಸಮೀಪದ ಗಂಗೇನಹಳ್ಳಿಯಲ್ಲಿ ಕುದುರೆಯನ್ನು ಚಿರತೆ ಬಲಿ ಪಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT