ಕ್ವಾಲಾಲಂಪುರ (ಐಎಎನ್ಎಸ್): ಜನಾಂಗೀಯ ನಿಂದನೆ ಮಾಡಲಾಗಿದ್ದ ವಿಷಯವಿರುವ ಕೃತಿಯೊಂದನ್ನು ಶಾಲಾ ಪಠ್ಯ ಪುಸ್ತಕವನ್ನಾಗಿ ಮಾಡಿರುವುದು ಸರಿಯಲ್ಲ, ಇದನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಭಾರತೀಯ ಮೂಲದವರು ಇಲ್ಲಿ ಪ್ರತಿಭಟನೆಗೆ ಇಳಿದಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ನಿಷೇಧಿತ ಸಂಘಟನೆಯೊಂದರ ಜತೆ ಭಾರತೀಯ ಮೂಲದವರು ಸೇರಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆಂದು ಆರೋಪಿಸಿ ಮಲೇಷ್ಯಾ ಪ್ರಧಾನಿ ನಜೀಬ್ ತುನ್ ರಜಾಕ್ ತಮ್ಮ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಮಲೇಷ್ಯಾಕ್ಕೆ ಕೆಟ್ಟ ಹೆಸರನ್ನು ತರುವ ಉದ್ದೇಶದಿಂದಲೇ ಭಾನುವಾರ ಹಿಂದೂ ಹಕ್ಕುಗಳ ಕಾರ್ಯಪಡೆ ಗೊಂದಲ ಉಂಟು ಮಾಡುತ್ತಿದೆ ಎಂದು ಪ್ರಧಾನಿ ನಜೀಬ್ ಹೇಳಿದ್ದಾರೆ.