ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕೆಲ ಆಟಗಾರರಿಂದಲೇ ಕ್ರಿಕೆಟ್‌ಗೆ ಅಪಖ್ಯಾತಿ'

Last Updated 13 ಜುಲೈ 2013, 19:59 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಕಾನೂನು ಬಾಹಿರ ಚಟುವಟಿಕೆಗಳ ಮೂಲಕ ಕೆಲವು ಆಟಗಾರರು ಕ್ರಿಕೆಟ್‌ಗೆ ಘನತೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಬಿಷನ್ ಸಿಂಗ್ ಬೇಡಿ ಶನಿವಾರ ಅಭಿಪ್ರಾಯ ಪಟ್ಟಿದ್ದಾರೆ.

`ಭಾರತ ಮಾತ್ರವಲ್ಲ ವಿಶ್ವ ಕ್ರಿಕೆಟ್‌ನ ಅವ್ಯವಸ್ಥೆಗೂ ಆಟಗಾರರೇ ಕಾರಣ. ಚೆಂಡು ವಿರೂಪಗೊಳಿಸುವ ಕೆಟ್ಟ ಅಭ್ಯಾಸ ಆಟಗಾರರಿಂದಲೇ ಬಂದದ್ದು. ಆದ್ದರಿಂದ ವಿಕೆಟ್ ಪಡೆದ ಬಳಿಕ ಇದೀಗ ಚೆಂಡನ್ನು ಪರೀಕ್ಷೆಗಾಗಿ ಅಂಪೈರ್‌ಗೆ ನೀಡಲಾಗುತ್ತದೆ' ಎಂದೂ ಅವರು ಹೇಳಿದ್ದಾರೆ.

`ಪಿಚ್‌ನ ಉದ್ದ, ಚೆಂಡಿನ ತೂಕ, ಸ್ಟಂಪ್‌ಗಳು ಸೇರಿದಂತೆ ಯಾವುದರಲ್ಲೂ ಬದಲಾವಣೆಯಾಗಿಲ್ಲ. ಆದರೆ ಆಟಗಾರರ ನಡವಳಿಕೆಯಲ್ಲಿ ಬದಲಾವಣೆ ಆಗಿದೆ' ಎಂದೂ ಅವರು ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT