ಕೆಂಗೇರಿ: ಕೇಂದ್ರ ಜವಳಿ ಸಚಿವಾಲಯದ ಸಹಯೋಗದಲ್ಲಿ ಕರಕುಶಲ ಮತ್ತು ಕೈಮಗ್ಗ ಸಂಸ್ಥೆಯು ಕೆಂಗೇರಿ ಉಪನಗರದ ಮೈದಾನದಲ್ಲಿ ಕೈಮಗ್ಗ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಿದೆ.
ದೇಶದ ವಿವಿಧ ಕಡೆಗಳಿಂದ ಆಗಮಿಸಿರುವ ಕುಶಲಕರ್ಮಿಗಳು ಸಿದ್ಧಪಡಿಸಿದ ಕರಕುಶಲ ವಸ್ತುಗಳು ಮಾರಾಟಕ್ಕಿವೆ. ಇದೇ 26ರವರೆಗೆ ಮೇಳ ನಡೆಯಲಿದ್ದು, ಸ್ಥಳೀಯರು ಇದರ ಸದುಪಯೋಗ ಪಡೆದುಕೊಳ್ಳಬಹುದು.
ಕೈಮಗ್ಗ ವಸ್ತುಗಳು, ಗುಡಿ ಕೈಗಾರಿಕಾ ಉತ್ಪನ್ನಗಳು, ಬಣ್ಣ ಬಣ್ಣದ ಕರಕುಶಲ ಆಟಿಕೆಗಳು, ಗೃಹೋಪಯೋಗಿ ಸಾಮಗ್ರಿಗಳು, ಅಲಂಕಾರಿಕ ವಸ್ತುಗಳು, ಹೊದಿಕೆಗಳು, ಉಡುಪುಗಳು, ಕಸೂತಿ ಉತ್ಪನ್ನಗಳು ಮೇಳದಲ್ಲಿವೆ.
ಸಚಿವೆ ಶೋಭಾ ಕರಂದ್ಲಾಜೆ ಅವರು ಮೇಳವನ್ನು ಇತ್ತೀಚೆಗೆ ಉದ್ಘಾಟಿಸಿದರು. ಪಾಲಿಕೆ ಸದಸ್ಯ ರಾ.ಆಂಜನಪ್ಪ ಇತರರು ಹಾಜರಿದ್ದರು.