ನಗರದಲ್ಲಿ ಶುಕ್ರವಾರ ನಡೆದ ಬಿಡಬ್ಲ್ಯುಎಸ್ಎಸ್ಬಿ ಕಂದಾಯ ಬೇಡಿಕೆ, ವಸೂಲಾತಿ ಮತ್ತು ಬಾಕಿ ಪರಿಶೀಲನಾ ಸಭೆಯಲ್ಲಿ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು. `ಈಗಾಗಲೇ ಕೊಳವೆ ಬಾವಿ ಕೊರೆಸಿದವರು 120 ದಿನಗಳ ಒಳಗೆ ಮಂಡಳಿಯಲ್ಲಿ ನೋಂದಣಿ ಮಾಡಿಸಬೇಕು' ಎಂದು ಸೂಚಿಸಿದರು.
ನಗರಕ್ಕೆ ಹೊಸದಾಗಿ ಸೇರ್ಪಡೆಯಾದ ಪ್ರದೇಶಗಳಲ್ಲಿ ನೀರಿನ ಸಂಪರ್ಕ ಕಾರ್ಯ ಮಂದಗತಿಯಲ್ಲಿ ನಡೆದಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, `ಮೀಟರ್ ಮೂಲಕವೇ ನೀರು ಪೂರೈಕೆಯಾಗಬೇಕು ಎಂಬುದು ಮಂಡಳಿ ಆಶಯವಾಗಿದೆ' ಎಂದು ಹೇಳಿದರು.
`ಮೀಟರ್ ಅಳವಡಿಕೆ ಕಾರ್ಯ ತೀವ್ರಗೊಳಿಸುವ ನಿಟ್ಟಿನಲ್ಲಿ ಪ್ರತಿ ಮೀಟರ್ ರೀಡರ್ಗೆ 2500 ಕಟ್ಟಡಗಳ ಗುರಿ ನೀಡಬೇಕು. ಅವರಿಗೆ ನಿಗದಿಪಡಿಸುವ ಸ್ಥಳದಲ್ಲಿ ಅನಧಿಕೃತ ಸಂಪರ್ಕ ಕಂಡುಬಂದಲ್ಲಿ ಅದಕ್ಕೆ ಅವರನ್ನೇ ಹೊಣೆ ಮಾಡಬೇಕು' ಎಂದು ಪ್ರಧಾನ ಎಂಜಿನಿಯರ್ ವೆಂಕಟರಾಜು ಸೂಚಿಸಿದರು.