ನವದೆಹಲಿ (ಪಿಟಿಐ): ಜನಸಾಮಾನ್ಯರ ಖರೀದಿ ಸಾಮರ್ಥ್ಯ ಹೆಚ್ಚಿಸಲು ಬಜೆಟ್ನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಇಂಗಿತ ವ್ಯಕ್ತಪಡಿಸಿದ್ದಾರೆ.
2011-12ನೇ ಸಾಲಿನ ಮುಂಗಡ ಪತ್ರವು, ಬೆಲೆಏರಿಕೆ ಬಿಸಿಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಕೆಲ ಮಟ್ಟಿಗೆ ಪರಿಹಾರ ಒದಗಿಸಲಿದೆ ಎನ್ನುವ ನಿರೀಕ್ಷೆಯ ಬೆನ್ನಲ್ಲೇ ಪ್ರಣವ್ ಈ ಭರವಸೆ ನೀಡಿದ್ದಾರೆ. ರಾಜ್ಯಸಭೆಯ ಪ್ರಶ್ನೋತ್ತರ ಕಲಾಪ ವೇಳೆ ಮಾತನಾಡುತ್ತಿದ್ದ ಅವರು, ಜನಸಾಮಾನ್ಯರ ಖರೀದಿ ಸಾಮರ್ಥ್ಯವು ಹೆಚ್ಚಳಗೊಂಡರೆ ಮಾತ್ರ ಆತ ಸರಕುಗಳನ್ನೇ ಖರೀದಿಸಬಲ್ಲ. ಆದ್ದರಿಮ ಆ ನಿಟ್ಟಿನಲ್ಲಿ ಸರ್ಕಾರದ ಚಿಂತನೆ ಸಾಗಿದೆ ಎಂದರು.