ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಶಾಲೆಗಳ ಬೇಡಿಕೆ ನ್ಯಾಯಯುತ

Last Updated 18 ಜುಲೈ 2012, 19:45 IST
ಅಕ್ಷರ ಗಾತ್ರ

ಬೆಂಗಳೂರು: `ಖಾಸಗಿ ಶಾಲೆಗಳು ಕೇಳುತ್ತಿರುವ ಬೇಡಿಕೆಗಳಲ್ಲಿ ಕೆಲವು ನ್ಯಾಯಯುತವಾಗಿವೆ. ಅವುಗಳನ್ನು ಸರ್ಕಾರ ಈಡೇರಿಸಲೇಬೇಕು. ಇಲ್ಲವಾದರೆ, ಪ್ರತಿಷ್ಠಾನದ ವತಿಯಿಂದ ಶಾಲೆಗಳನ್ನು ಬಂದ್ ಮಾಡದೆ, ಸತ್ಯಾಗ್ರಹವನ್ನು ನಡೆಸಲಾಗುವುದು~ ಎಂದು ಕರ್ನಾಟಕ ಸ್ವತಂತ್ರ ಶಾಲೆಗಳ ಆಡಳಿತ ಮಂಡಳಿಯ ಪ್ರತಿಷ್ಠಾನದ ಅಧ್ಯಕ್ಷ ಎಲ್.ಆರ್.ಶಿವರಾಮೇಗೌಡ ಹೇಳಿದರು.

ಬುಧವಾರ ಪತ್ರಿಕಾಗೋಷ್ಠೀಯಲ್ಲಿ ಮಾತನಾಡಿದ ಅವರು, `ಸರ್ಕಾರವು ಎಲ್ಲ ಸಮಸ್ಯೆಗಳನ್ನು ಮಾತುಕತೆ ನಡೆಸುವ ಮೂಲಕ ಪರಿಹರಿಸಬಹುದಿತ್ತು. ಪರಿಸ್ಥಿತಿಯನ್ನು ವಿಕೋಪಕ್ಕೆ ಹೋಗದಂತೆ ತಡೆಯಬಹುದಿತ್ತು. ಆದರೆ, ಸರ್ಕಾರ ಇದರ ವ್ಯತಿರಿಕ್ತ ಕ್ರಮಗಳನ್ನು ಕೈಗೊಂಡು ಕಾನೂನನ್ನು ಗೊಂದಲಮಯವಾಗಿಸಿದೆ~ ಎಂದರು.

`ಸರ್ಕಾರ ಖಾಸಗಿ ಶಾಲೆಗಳಿಗೆ ನೀಡಿರುವ ನೋಟಿಸ್ ಅನ್ನು ವಾಪಸು ಪಡೆಯಬೇಕು. ಸರ್ಕಾರವು ಶಿಕ್ಷಣಕ್ಕೆ ಏಕ ರೀತಿಯ ಕಾನೂನು ಜಾರಿಗೆ ತರಲಿ. ಶಿಕ್ಷಣ ಹಕ್ಕು ಕಾಯ್ದೆಗೆ ಇರುವ ಗೊಂದಲಸರಿಪಡಿಸಬೇಕು~ ಎಂದರು.

`ರಾಜ್ಯ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘದ (ಕುಸ್ಮಾ)ಪ್ರತಿಭಟನೆಯಿಂದ ಕಷ್ಟಕ್ಕೆ ಸಿಲುಕಿದವರು ಮಕ್ಕಳು ಮತ್ತು ಪೋಷಕರು. ಅವರಿಗೆ ಅನ್ಯಾಯವಾಗದಂತೆ ಸರ್ಕಾರ ಕ್ರಮಗಳನ್ನು ಕೈಗೊಳ್ಳಬೇಕು. ಸರ್ಕಾರ ಮತ್ತು ಕುಸ್ಮಾ ದ ನಡುವೆ ಮಧ್ಯೆ ಪ್ರವೇಶಿಸಿ ಸಭೆಯನ್ನು ನಡೆಸಿ ಸಮಾಲೋಚನೆ ನಡೆಸಲಾಗುವುದು~ ಎಂದರು.

`ಕಡ್ಡಾಯ ಶಿಕ್ಷಣಕ್ಕೆ ಪ್ರತಿಷ್ಠಾನವು ಎಂದಿಗೂ ವಿರೋಧ ವ್ಯಕ್ತಪಡಿಸಿಲ್ಲ. ಆದರೆ, ಖಾಸಗಿ ಶಾಲೆಗಳ ಅಹವಾಲುಗಳನ್ನು ಸರ್ಕಾರ ಕೇಳಬೇಕು. ಅದಕ್ಕೆ ಪರಿಹಾರಗಳನ್ನು ಸೂಚಿಸಬೇಕು~ ಎಂದು ಹೇಳಿದರು.

`ಕುಸ್ಮಾ ಪ್ರತಿಭಟನೆಯನ್ನು ವಾಪಸು ಪಡೆದಿರುವುದರಿಂದ ಸಮಸ್ಯೆ ಪರಿಹಾರವಾಯಿತೆಂದು ಸರ್ಕಾರ ಸುಮ್ಮನೆ ಕುಳಿತುಕೊಳ್ಳುವಂತಿಲ್ಲ. ಶಿಕ್ಷಣ ಹಕ್ಕು ಕಾಯ್ದೆಯ ಗೊಂದಲವನ್ನು ಪರಿಹರಿಸಬೇಕು. ನಾವು ಇಟ್ಟಿರುವ ಬೇಡಿಕೆಗಳ ಅವಲೋಕನ ನಡೆಸಬೇಕು~ ಎಂದರು. ಗೋಷ್ಠಿಯಲ್ಲಿ ಕಾರ್ಯಕಾರಿ ಅಧ್ಯಕ್ಷ ಜಿ.ಸಿ.ಚಂದ್ರಶೇಖರ್, ವ್ಯವಸ್ಥಾಪಕ ಕಾರ್ಯದರ್ಶಿ ಮಾನ್ಸೂರ್ ಅಲಿ ಖಾನ್ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT