`ಗಡಿ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಚೀನಾದೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ. ಘಟನೆ ಕುರಿತು ಎರಡೂ ದೇಶಗಳ ಸೇನಾಧಿಕಾರಿಗಳ ಸಭೆಗಳು ನಡೆಯುತ್ತಿದ್ದು, ಘಟನೆಯ ವಾಸ್ತವಾಂಶಗಳನ್ನು ಪರಿಶೀಲಿಸಿದ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು' ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಸಲ್ಮಾನ್ ಖುರ್ಷಿದ್ ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
ಚೀನಾದ `ಪೀಪಲ್ಸ್ ಲಿಬರೇಶಷನ್ ಆರ್ಮಿ' (ಪಿಎಲ್ಎ) ಕಳೆದ ಏಪ್ರಿಲ್ 15ರಂದು ಭಾರತದ ಗಡಿಯೊಳಗೆ 10 ಕಿ.ಮೀ. ನುಸುಳಿ ದೌಲತ್ ಬೆಗ್ ಒಲ್ಡಿ (ಡಿಬಿಒ) ಭಾಗದ ಬರ್ಥೆ ಪ್ರದೇಶವನ್ನು ಅತಿಕ್ರಮಿಸಿಕೊಂಡು ಬೀಡುಬಿಟ್ಟಿತ್ತು.