ವಿಜಾಪುರ: ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಪ್ರತಿಷ್ಠಾಪಿಸಿದ್ದ ಬಹುತೇಕ ಗಣೇಶ ವಿಗ್ರಹಗಳನ್ನು 7ನೇ ದಿನವಾದ ಭಾನುವಾರ ಸಡಗರದಿಂದ ಮೆರವಣಿಗೆ ನಡೆಸಿ ವಿಸರ್ಜಿಸಲಾಯಿತು.
ನಗರದಲ್ಲಿ ನಡೆದ ಅದ್ದೂರಿ ಮೆರವಣಿಗೆಯಲ್ಲಿ ಆನೆ, ಕುದುರೆಗಳನ್ನು ಬಳಸಿಕೊಳ್ಳಲಾಗಿತ್ತು. ಯುವಕರು ಮೆರವಣಿಗೆಯುದ್ದಕ್ಕೂ ಕುಣಿದು ಕುಪ್ಪಳಿಸಿದರು. ಗಜಾನನ ಉತ್ಸವ ಮಹಾಮಂಡಳಿಯವರು ಇಲ್ಲಿಯ ಗಾಂಧಿಚೌಕ್ನಲ್ಲಿ ಸಮಾರಂಭ ಏರ್ಪಡಿಸಿ ಎಲ್ಲ ಸಾರ್ವಜನಿಕ ಗಣೇಶ ಉತ್ಸವ ಮಂಡಳಿಗಳ ಮುಖಂಡರನ್ನು ಸನ್ಮಾನಿಸಿದರು.
ಮೆರವಣಿಗೆ ಸುಗಮವಾಗಿ ಸಾಗುವ ದೃಷ್ಟಿಯಿಂದ ಪೊಲೀಸರು ಇಲ್ಲಿಯ ಗಾಂಧಿಚೌಕ್ನಿಂದ ಶಿವಾಜಿ ಚೌಕ್ವರೆಗಿನ ರಸ್ತೆಯ ಮಧ್ಯಭಾಗದಲ್ಲಿ ಬ್ಯಾರಿಕೇಡ್ಗಳನ್ನು ನಿರ್ಮಿಸಿದ್ದರು. ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.