ಮುಂಬೈ (ಪಿಟಿಐ): ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿರುವುದನ್ನು ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಶ್ಲಾಘಿಸಿದ್ದಾರೆ.
‘ಇದು ಅತಿ ಅಪರೂಪದಲ್ಲಿ ಅಪರೂಪ ಪ್ರಕರಣವಾಗಿತ್ತು. ಬರ್ಬರವಾಗಿ ಅತ್ಯಾಚಾರಕ್ಕೊಳಗಾಗಿ ಪ್ರಾಣಕಳೆದುಕೊಂಡ ಯುವತಿ ಹಾಗೂ ಆಕೆಯ ಕುಟುಂಬಕ್ಕೆ ನ್ಯಾಯ ದೊರಕಿದಂತಾಗಿದೆ. ನಾನು ತೀರ್ಪನ್ನು ಸ್ವಾಗತಿಸುತ್ತೇನೆ’ ಎಂದು ಶಿಂಧೆ ಸುದ್ದಿಗಾರರಿಗೆ ತಿಳಿಸಿದರು.
‘ಮರಣದಂಡನೆ ವಿಧಿಸುವ ಮೂಲಕ ಇಂತಹ ಪೈಶಾಚಿಕ ಕೃತ್ಯ ದಲ್ಲಿ ತೊಡಗಿದವರಿಗೆ ಕಠಿಣ ಶಿಕ್ಷೆಯಾಗುತ್ತದೆ ಎಂಬುದನ್ನು ‘ನ್ಯಾಯ ದೇವತೆ’ ತೋರಿಸಿಕೊಟ್ಟಿದ್ದಾಳೆ’ ಎಂದು ಸಚಿವರು ಹೇಳಿದರು.
‘ಈ ಘಟನೆ ನಡೆದ ಬಳಿಕ ದೇಶದಲ್ಲಿ ಎಂತಹ ವಾತಾವರಣ ಸೃಷ್ಟಿಯಾಗಿತ್ತು ಎಂದರೆ, ಇಂತಹ ಶಿಕ್ಷೆಯನ್ನು ನಾವು ನಿರೀಕ್ಷಿಸಿದ್ದೆವು’ ಎಂದೂ ಅವರು ಹೇಳಿದರು.
ರಾಜಕೀಯ ಒತ್ತಡದಿಂದ ಈ ತೀರ್ಪು ಹೊರಬಿದ್ದಿದೆ ಎಂಬ ಪ್ರತಿವಾದಿ ವಕೀಲ ಎ.ಪಿ. ಸಿಂಗ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿಂಧೆ, ನ್ಯಾಯಾಂಗವು ಕಾನೂನಿನ ಆಧಾರದಲ್ಲಿ ಕಾಯರ್ನಿವರ್ಹಿಸುತ್ತದೆಯೇ ಹೊರತು ರಾಜಕೀಯ ಒತ್ತಡದಿಂದಲ್ಲ’ ಎಂದರು.