ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹಸಚಿವ ಶಿಂಧೆ ಸ್ವಾಗತ

Last Updated 13 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿರುವುದನ್ನು ಗೃಹ ಸಚಿವ ಸುಶೀಲ್‌ ಕುಮಾರ್‌ ಶಿಂಧೆ ಶ್ಲಾಘಿಸಿದ್ದಾರೆ.

‘ಇದು ಅತಿ ಅಪರೂಪದಲ್ಲಿ ಅಪರೂಪ  ಪ್ರಕರಣವಾಗಿತ್ತು. ಬರ್ಬರ­ವಾಗಿ ಅತ್ಯಾಚಾರಕ್ಕೊಳಗಾಗಿ  ಪ್ರಾಣ­ಕಳೆದು­ಕೊಂಡ ಯುವತಿ ಹಾಗೂ ಆಕೆಯ ಕುಟುಂಬಕ್ಕೆ ನ್ಯಾಯ ದೊರಕಿ­ದಂತಾಗಿದೆ. ನಾನು ತೀರ್ಪನ್ನು ಸ್ವಾಗತಿ­ಸು­ತ್ತೇನೆ’ ಎಂದು ಶಿಂಧೆ ಸುದ್ದಿಗಾರರಿಗೆ ತಿಳಿಸಿದರು.

‘ಮರಣದಂಡನೆ ವಿಧಿಸುವ ಮೂಲಕ   ಇಂತಹ ಪೈಶಾಚಿಕ ಕೃತ್ಯ ದಲ್ಲಿ ತೊಡಗಿದ­ವ­ರಿಗೆ ಕಠಿಣ ಶಿಕ್ಷೆಯಾಗುತ್ತದೆ ಎಂಬು­ದನ್ನು ‘ನ್ಯಾಯ ದೇವತೆ’ ತೋರಿಸಿ­ಕೊಟ್ಟಿ­ದ್ದಾಳೆ’ ಎಂದು ಸಚಿವರು ಹೇಳಿದರು.

‘ಈ ಘಟನೆ ನಡೆದ ಬಳಿಕ ದೇಶದಲ್ಲಿ ಎಂತಹ ವಾತಾವರಣ ಸೃಷ್ಟಿಯಾಗಿತ್ತು ಎಂದರೆ, ಇಂತಹ ಶಿಕ್ಷೆಯನ್ನು ನಾವು  ನಿರೀಕ್ಷಿಸಿದ್ದೆವು’ ಎಂದೂ ಅವರು ಹೇಳಿದರು.

ರಾಜಕೀಯ ಒತ್ತಡದಿಂದ ಈ ತೀರ್ಪು ಹೊರಬಿದ್ದಿದೆ ಎಂಬ ಪ್ರತಿವಾದಿ ವಕೀಲ ಎ.ಪಿ. ಸಿಂಗ್‌ ಅವರ ಹೇಳಿಕೆಗೆ ಪ್ರತಿ­ಕ್ರಿಯಿ­ಸಿದ ಶಿಂಧೆ, ನ್ಯಾಯಾಂಗವು ಕಾನೂನಿನ ಆಧಾರದಲ್ಲಿ ಕಾಯ­ರ್ನಿ­ವರ್ಹಿಸು­ತ್ತ­ದೆಯೇ ಹೊರತು ರಾಜಕೀಯ ಒತ್ತಡದಿಂದಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT