ವಿವೇಚನೆ ಇಲ್ಲದೆ, ವಿಶ್ಲೇಷಣೆ ಮಾಡದೆ, ಜನಪರ ಚಿಂತನೆ ಇಲ್ಲದೆ ಎಲ್ಲೆಂದರಲ್ಲಿ ಆಂಗ್ಲ ಮಾಧ್ಯಮ ಶಾಲೆಗೆ ಅನುಮತಿ ನೀಡುತ್ತಾ ಮಾತೃಭಾಷೆಗೆ ಮಾತ್ರವಲ್ಲ ನಮ್ಮ ಗ್ರಾಮೀಣ ಪರಿಸರದ ಸಂಸ್ಕೃತಿಯನ್ನು ನಾಶ ಮಾಡಲು ಹೊರಟಂತಿದೆ ಸರ್ಕಾರದ ಈ ಕ್ರಮ.
ಬಡಜನರ ವಿರೋಧಿಯಾದ ಈ ಅಮಾನವೀಯ ಕ್ರಮವನ್ನು ಎಲ್ಲ ದೇಶಿ ಚಿಂತಕರು ಖಂಡಿಸಬೇಕಿದೆ ಮತ್ತು ಸರ್ಕಾರದ ನೇತ್ಯಾತ್ಮಕ ಕಾರ್ಯಕ್ರಮ ಅನುಷ್ಠಾನಗೊಳ್ಳದಂತೆ ಒತ್ತಡ ಹೇರಬೇಕಾಗಿದೆ.
ಅಪ್ರಯೋಜಕವಾದ ಕನ್ನಡ ಶಾಸ್ತ್ರೀಯ ಭಾಷಾ ಸ್ಥಾನಮಾನಕ್ಕಾಗಿ ಒತ್ತಾಯಿಸದೆ ಕನ್ನಡ ನಾಡು-ನುಡಿಯ ಕಳಕಳಿಯುಳ್ಳವರೆಲ್ಲ ರಾಜ್ಯ ಸರ್ಕಾರದ ಈ ಕ್ರಮವನ್ನು ಖಂಡಿಸಬೇಕು ಮತ್ತು ಕನ್ನಡವಾದ ಮಾತೃಭಾಷಾ ಶಿಕ್ಷಣಕ್ಕೆ ಬೆಂಬಲವಾಗಿ ನಿಲ್ಲಬೇಕು.