ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಣ್ಣರ ಪಂಚಾಮೃತಗಾಯನ

Last Updated 10 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಯಲಹಂಕದ ಮಾರುತಿ ಬಡಾವಣೆಯಲಿ ಪಂಚಾಮೃತ ಸುಗಮ ಸಂಗೀತ ಶಾಲೆ ಆಯೋಜಿಸಿದ್ದ ಇಂಚರ ಕಾರ್ಯಕ್ರಮದಲ್ಲಿ ಚಿಣ್ಣರ ಗಾಯನ ಪ್ರೇಕ್ಷಕರನ್ನು ಮುದಗೊಳಿಸಿತು.

ಪ್ರಥಮಾ ಪಿ.ದೀಕ್ಷಿತ್ ಹಾಡಿದ `ವಿಘ್ನೇಶ್ವರ ವಿನಾಯಕ~ನ ಹಾಡಿನೊಂದಿಗೆ ಕಾರ್ಯಕ್ರಮ ಆರಂಭವಾಯಿತು.  ನಂತರ `ಬಂದಾನೋ ಬಂದ ಸವಾರ~ (ಬಿ.ವಿ. ಕಾರಂತರ ರಂಗಗೀತೆ), `ನೀರಿಗೆ ನೈದಿಲೆ ಶೃಂಗಾರ~ (ವಚನ), ದ.ರಾ.ಬೇಂದ್ರೆ ಅವರ `ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ~ ಹಾಗೂ ಜಾನಪದ ಗೀತೆಗಳನ್ನು ಹಾಡಿ ರಂಜಿಸಿದರು.

ಪ್ರಿಯಾಂಶು ಹಾಡಿದ `ಅಮ್ಮ ಬೇಕೇ ಬೇಕು ನಂಗೆ ಚಂದ್ರ ಆಡೋಕೆ~ (ಎಚ್.ಎಸ್. ವೆಂಕಟೇಶಮೂರ್ತಿ), `ಚೆಲುವು ನೋಡಮ್ಮ  ಚೆಲುವು~ ಭಕ್ತಿ ಗೀತೆಗಳ ಗಾಯನ ಶ್ರೋತೃವರ್ಗವನ್ನು ಮಂತ್ರಮುಗ್ಧಗೊಳಿಸಿತು.

ಹಿರಿಯ ಗಾಯಕಿ ಕೆ.ಎನ್. ಜಯಂತಿ ಅವರು ಹಾಡಿದ ಕೆಲ ಗೀತೆಗಳು ಕಾರ್ಯಕ್ರಮಕ್ಕೆ ಮತ್ತಷ್ಟು ರಂಗು ತಂದಿತು.ಅಭಿಜಿತ್ (ಹಾರ್ಮೋನಿಯಂ), ಗುರುನಂದನ್ (ತಬಲಾ), ವಿಶೇಷ ಲಯವಾದ್ಯದಲ್ಲಿ ರವಿ ಸಹಕರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT