ಚುನಾವಣೆ ಎಂದರೆ ಕೇವಲ ರಾಜಕೀಯ ಪಕ್ಷಗಳ ನಡುವಿನ ಹಣಾಹಣಿ ಅಲ್ಲ. ಇದರಲ್ಲಿ ಹಬ್ಬದ ಸಂಭ್ರಮ, ಯುದ್ಧದ ಜಿದ್ದು, ಆಟದ ಮೋಜು ಎಲ್ಲವೂ ಮೇಳೈಸಿರುತ್ತದೆ. ರಾಜ್ಯ ವಿಧಾನಸಭೆಗೆ ಈ ಬಾರಿ ನಡೆಯಲಿರುವ ಚುನಾವಣೆಯಲ್ಲಿ ಸೋಲು- ಗೆಲುವುಗಳನ್ನು ಮೀರಿ ನಡೆಯುವ ವಿದ್ಯಮಾನಗಳ ಒಳನೋಟಗಳನ್ನು ಓದುಗರಿಗೆ ನೀಡುವ ಪ್ರಯತ್ನ ನಮ್ಮದು. ಮೊದಲ ಹಂತದಲ್ಲಿ ಎನ್. ಉದಯಕುಮಾರ್ ಮತ್ತು ರವೀಂದ್ರ ಭಟ್ಟ ಅವರಿಂದ ಕ್ರಮವಾಗಿ ತುಮಕೂರು ಹಾಗೂ ಬಾಗಲಕೋಟೆ ಜಿಲ್ಲೆಗಳ ರಾಜಕೀಯ ನೋಟ ನಿರೀಕ್ಷಿಸಿ...