ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರಿ 5, ಗುರುವಾರ

Last Updated 5 ಜನವರಿ 2012, 5:00 IST
ಅಕ್ಷರ ಗಾತ್ರ

ಪ್ರವಚನ
ಅಧ್ಯಾತ್ಮ  ಪ್ರಕಾಶ ಕಾರ್ಯಾಲಯ:  ಶಿವರಾಮ ಅಗ್ನಿಹೋತ್ರಿಗಳಿಂದ `ಮಾಂಡೂಕ್ಯೋಪನಿಷತ್ತು~ ಕುರಿತು ಪ್ರವಚನ.
ಸ್ಥಳ: ನಂ.68, ಎ.ಪಿ.ಕೆ. ರಸ್ತೆ, 2ನೇ ವಿಭಾಗ, ತ್ಯಾಗರಾಜ ನಗರ. ಬೆಳಿಗ್ಗೆ 9.30ರಿಂದ.

ಗೋಷ್ಠಿ ಗಾಯನ
ಮದ್ವಾದಿರಾಜ ಕಲಾಮಹೋತ್ಸವ: ಬೆಳಿಗ್ಗೆ 7ಕ್ಕೆ ಶಂಕರ ಮಧ್ವ ರಾಮಾನುಜ ಪೂಜಾ, 10.15ಕ್ಕೆ ಗಾನ ಯಜ್ಞ-ಗೋಷ್ಠಿ ಗಾಯನ. ಸಾಯಿಕೀರ್ತಿ (ಪಿಟೀಲು) ಬಿ.ಆರ್. ಶ್ರೀನಿವಾಸ್ (ಮೃದಂಗ) ಗುರುಮೂರ್ತಿ (ಘಟಂ) ಮಧ್ಯಾಹ್ನ 1ಕ್ಕೆ ವಾದಿರಾಜ ನಾಮಾವಳಿ. ಸಂಜೆ 4.45ರಿಂದ ಭದ್ರಗಿರಿ ಅಚ್ಯುತದಾಸರಿಂದ ಹರಿಕಥೆ. 6.30ರಿಂದ ರಾಗಾಧಾರಿತ ಚಿತ್ರಗೀತೆಗಳು. ನಿರೂಪಣೆ: ಆರ್.ಕೆ. ಪದ್ಮನಾಭ. ಗಾಯನ: ಎಂ.ಡಿ. ಪಲ್ಲವಿ ಮತ್ತು ಅಜಯ್ ವಾರಿಯರ್.

ಸ್ಥಳ: ನಾದ ಮಂಟಪ, ಚಂದ್ರಶೇಖರ ಭಾರತಿ ಕಲ್ಯಾಣ ಮಂಟಪದ ಆವರಣ, ಪಂಪ ಮಹಾಕವಿ ರಸ್ತೆ, ಶಂಕರಪುರಂ.

ಗಾಯನ-ನೃತ್ಯ
ಸಂಗೀತ ಸಂಭ್ರಮ: `ನಿರಂತರಂ~ ಸಂಗೀತ ಹಾಗೂ ನೃತ್ಯೋತ್ಸವದಲ್ಲಿ ಪಿ.ರಮಾ ಅವರಿಂದ ಗಾಯನ. ರಘುರಾಮ್(ಕೊಳಲು), ಮನೋಜ್ ಸಿ.ಜಾರ್ಜ್ (ವೆಸ್ಟರ್ನ್ ವಯಲಿನ್), ವರುಣ್ (ಕೀಬೋರ್ಡ್), ವಿಶ್ವನಾಥ್ ನಾಕೋಡ್ (ತಬಲಾ), ಹರ್ಷ ಸಾಮಗ (ಮೃದಂಗ), ಕಾರ್ತಿಕ್ ಮಣಿ (ಡ್ರಮ್ಸ). ನಂತರ ವೈಜಯಂತಿ ಕಾಶಿ ಅವರಿಂದ ಕೂಚುಪುಡಿ ನೃತ್ಯ.
ಅತಿಥಿ: ಡಾ.ಆರ್.ವಿ. ರಾಘವೇಂದ್ರ, ಆಶಾ ಗೋಪಾಲ್.
ಸ್ಥಳ: ಸೇವಾ ಸದನ, 14ನೇ ಮುಖ್ಯರಸ್ತೆ, ಎಂಎಲ್‌ಎ ಕಾಲೇಜು ಎದುರು, ಮಲ್ಲೇಶ್ವರಂ. ಸಂಜೆ 6.

ಉಪನ್ಯಾಸ
ಕನ್ನಡ ಯುವಜನ ಸಂಘ: ಕನ್ನಡ ಮಹಿಳಾ ಕಾವ್ಯ ಮತ್ತು ಮಹಿಳೆಯರ ಪ್ರತಿನಿಧಿಕರಣ ಬಗ್ಗೆ ಮಮತಾ ಸಾಗರ್ ಅವರಿಂದ ಉಪನ್ಯಾಸ. ಅಧ್ಯಕ್ಷತೆ: ಜಗದೀಶ ರೆಡ್ಡಿ. ಅತಿಥಿ: ಬಿ.ಬದ್ರೇಗೌಡ, ರಂಗಭೂಮಿ ಹಾಗೂ ಕಿರುತೆರೆ ಕಲಾವಿದರಿಂದ ವಿಜಯಕುಮಾರ್ ಜಿತೂರಿ ಅವರಿಂದ ರಂಗಗೀತೆಗಳು.
ಸ್ಥಳ: ಕನ್ನಡ ಯುವಜನ ಸಂಘದ ಸಭಾಂಗಣ. ಸಂಜೆ 6.

ಅಭಿನಂದನೆ
ಆಚಾರ್ಯಶ್ರೀ 108 ಗುಣಧರನಂದಿ ಮಹಾರಾಜರ ಅಭಿನಂದನಾ ಸಮಾರಂಭ: ಬೆಳಿಗ್ಗೆ 7ಕ್ಕೆ ಮಾಗಡಿ ರಸ್ತೆ ಜಿನಮಂದಿರದ ದರ್ಶನ- ಶ್ರವಣಬೆಳಗೊಳದ ಕಡೆಗೆ ಆಚಾರ್ಯಶ್ರೀ ಅವರ ವಿಹಾರ.

ಗೀತಾನುಸಂಧಾನ
ಯಕ್ಷಗಾನ ಯೋಗಕ್ಷೇಮ ಅಭಿಯಾನ ಬೆಂಗಳೂರು: ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸೋಂದಾ ಸ್ವರ್ಣವಲ್ಲೆ ಮಹಾಸಂಸ್ಥಾನ ಸರ್ವಜ್ಞೇಂದ್ರ ಪ್ರತಿಷ್ಠಾನ ಸೋಂದಾ ಭಗವದ್ಗೀತಾ ಅಭಿಯಾನದ ಪ್ರಯುಕ್ತ ಗೀತಾ ಪಠಣ ಮತ್ತು ಯಕ್ಷ ಶಾಲ್ಮಲಾ ಶಿರಸಿ ಅವರಿಂದ ಗೀತಾನುಸಂಧಾನ ಯಕ್ಷಗಾನ.
ಸ್ಥಳ: ಶ್ರೀ ಮಡಿವಳ ಮಾಚೀದೇವ ದೇವಸ್ಥಾನ, ಕೆಂಪಾಂಬುಧಿ ಕೆರೆ ಅಂಗಳ, ಕೆಂಪೇಗೌಡನಗರ. ಸಂಜೆ 5.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT